ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್): ಆಫ್ರಿಕಾ ಖಂಡದಲ್ಲಿನ ಪ್ರಮುಖ ರಾಷ್ಟ್ರವಾದ ಕೀನ್ಯಾಕ್ಕೆ ರಾಜತಾಂತ್ರಿಕ ಅಧಿಕಾರಿಯಾಗಿ ತೆರಳುತ್ತಿರುವ ವೀರೇಂದ್ರ ಪೌಲ್ ರನ್ನು ಕರ್ನಾಟಕ ಸರಕಾರದ ಅನಿವಾಸಿ ಫಾರಂ ನ ಮಾಜಿ ಉಪಾಧ್ಯಕ್ಷರೂ,ಕಾಂಗ್ರೆಸ್ ಮುಖಂಡರಾದ ಡಾ.ಆರತಿ ಕೃಷ್ಣ ರವರು ಅಭಿನಂದಿಸಿದರು.ಭಾರತ ಕೀನ್ಯಾದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದು,ಇದನ್ನು ಉಳಿಸುವಲ್ಲಿ ಮತ್ತು ಬೆಳೆಸುವಲ್ಲಿ ಹೈಕಮಿಷನರ್ ರ ಪಾತ್ರ ಮಹತ್ತರವಾದುದು.ವಿಶ್ವ ಸಂಸ್ಥೆಯ ಎರಡು ಪ್ರಮುಖ ಯೋಜನೆಯ ಮುಖ್ಯ ಕಚೇರಿಯನ್ನು ಹೊಂದಿರುವ ಏಕೈಕ ನಗರ ನೈರೋಬಿ ಆಗಿದ್ದು ಕೀನ್ಯಾದ ಪ್ರಮುಖ ನಗರವಾಗಿದೆ.ಜಗತ್ತಿನ ಅತ್ಯಾಕರ್ಷಕ ಅಭಯಾರಣ್ಯ ಮಸಾಯಿ ಮಾರಾ ಕೀನ್ಯಾದಲ್ಲಿ ನೆಲೆಗೊಂಡಿದ್ದು ಪ್ರವಾಸಿಗರನ್ನು ಮನಸೂರೆಗೊಳಿಸುತ್ತಿದೆ.
ವೀರೇಂದ್ರ ಪೌಲ್ ರವರು ಈ ಹಿಂದೆ ವಾಷಿಂಗ್ಟನ್ ಡಿಸಿ,ಲಂಡನ್ ಮತ್ತು ಜಿನೀವಾದಲ್ಲಿ ಭಾರತ ಸರಕಾರಕ್ಕಾಗಿ ವಿವಿಧ ಹುದ್ದೆಗಳನ್ನು ವಹಿಸಿದ್ದಾರೆ.ಡಾ.ಆರತಿ ಕೃಷ್ಣರವರು ಪೌಲ್ ರ ಮುಂದಿನ ಜವಬ್ದಾರಿಗೆ ಶುಭ ಹಾರೈಕೆ ಸಲ್ಲಿಸಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.