“ಎಲವೋ ದುರುಳ ಬರಿತ ನೀನು ತರುಣಿಮಣಿಯ ಕೆಣಕಲೇಕೆ” ಎಂದು ರುದ್ರಕೋಪನ ಸಿಟ್ಟು ಸಿಡುಕುನಿಂದ ರಂಗದ ಮೇಲೆ ಪಿಂಡೋಭ್ವವ ಅಬ್ಬರ ಪ್ರವೇಶವನ್ನು ನಾವು ನೋಡುತ್ತಿರುತ್ತೇವೆ. ಹಾರಾಡಿ ಸರ್ಮೋತ್ತಮ ಗಾಣಿಗರು ರಂಗದ ಮೇಲೆ ರುದ್ರಕೋಪನಾಗಿ ಅಬ್ಬರಿಸಿ ಬಂದರೆ ಆ ನಡೆ ಚುರುಕು ರಂಗದ ತಾಲೀಮು ಎಲ್ಲವನ್ನು ಗಮನಿಸುತ್ತೇವೆ. ಬಡಗುತ್ತಿಟ್ಟಿನ ಪರಂಪರೆಯ ಪುರುಷವೇಷಧಾರಿಯಾಗಿ ರಂಗದ ಪಾತ್ರ ಪೋಷಣೆಯನ್ನು ಸಮರ್ಥವಾಗಿ ನಿಭಾಹಿಸುವ ಸಾಮರ್ಥ್ಯ ಸರ್ವಗಾಣಿಗರಲ್ಲಿ ಕಾಣಬಹುದು. ಕರಾವಳಿಯ ಮನೆಮನಗಳಲ್ಲಿ ಕಲಾ ಸರಸ್ವತಿ ನೆಲೆಸುತ್ತಾಳೆ ಪೊಡವಿಗೊಡೆಯನ ನಾಡಾದ ಪ್ರದೇಶವಾದ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹಾರಾಡಿ ಯ ದಿ. ಶ್ರೀ ಕೃಷ್ಣ ಗಾಣಿಗ ಹಾಗು ಶ್ರೀಮತಿ ಗೋಪಮ್ಮನವರ ಗರ್ಭಸಂಜಾತರಾಗಿ ನಾಲ್ಕು ಜನ ಮಕ್ಕಳಲ್ಲಿ ಮೂರನೆವರಾಗಿ 10-07-1955ರಲ್ಲಿ ಜನಿಸಿದರು. ಹಾರಾಡಿ ಶಾಲೆಯಲ್ಲಿ ನಾಲ್ಕನೇ ತರಗತಿಗೆ ತೀಲಾಂಜಲಿ ಹಾಕಿ, ತಮ್ಮ ಮನೆತನದಲ್ಲಿ ಯಕ್ಷಗಾನ ಪರಂಪರೆ ಇದ್ದುದ್ದರಿಂದ ತಮ್ಮ ಸೋದರ ಸೋದರ ಮಾವನ ಪ್ರೇರಣೆಯನ್ನು ಕಲಾರಂಗಕ್ಕೆ ಬಂದರು. ಉಡುಪಿ ಕಲಾರಂಗದ ವಿದ್ಯಾರ್ಥಿಯಾಗಿ ಸೇರಿಕೊಂಡ ಸರ್ವಗಾಣಿಗರು ಗುರು ವೀರಭದ್ರ ನಾಯಕರು ಮಟ್ಟಾಡಿ ತಿಟ್ಟಿನ ರಂಗದ ನಿಲುವು ಕುಣಿತದ ಬಂಗಿಯ ನಿರ್ವಹಣೆಯನ್ನು ಹಾಗು ಗುರು ನೀಲಾವರ ರಾಮಕೃಷ್ಣಯ್ಯ ಹಾಗು ಹಿರಿಯಡ್ಕ ಗೋಪಾಲರಾಯರಿಂದ ರಂಗದ ಸಂಪ್ರದಾಯವಾಗಿ ನಡೆಯನ್ನು ಕಲಿತರು. ಹಾರಾಡಿ ಮನೆತನದ ವಂಶ ಪರಂಪರೆಯಿಂದ ಬಂದ ಹಾರಾಡಿ ಶೈಲಿಯ ಗತ್ತುಗಾರಿಗೆ, ಗಂಭೀರತೆ ಜಾಪು ಎಲ್ಲವನ್ನು ಕರಗತ ಮಾಡಿಕೊಂಡು ಉಭಯ ತ್ತಿಟ್ಟುಗಳ ಪರಂಪರೆಯ ಕಲಾವಿಧನಾಗಿ ಹೊರಬಂದರು.
ಜಗತ್ತಿನಾದ್ಯಂತ ಸಪ್ತ ಸಾಗರದಾಚೆ ಯಕ್ಷಗಾನ ದೇವಾ ಮೃತವನ್ನು ದೇವಾ ಕುಸುಮದ ಸುಗಂಧವನ್ನು ಪಸರಿತ ಕೀರ್ತಿ ಶ್ರೀಯುತರಿಗೆ ಲಭಿಸಬೇಕು. ಅಮೇರಿಕ, ಕೆನಡಾ, ಜರ್ಮನಿ, ಸ್ವಿಜರ್ಲೆಂಡ್, ಹಾಂಕಾಂಗ್ ಗಳಲ್ಲಿ ಯಕ್ಷ ಕುಸುಮವನ್ನು ಪಸರಿಸಿದ ಕೀರ್ತಿ ಶ್ರೀಯುತರದ್ದು. ಶ್ರೀಯುತರ ಈ ಕಲಾ ಸೇವೆಯನ್ನು ಗುರುತಿಸಿ “ಉಡುಪಿ ಜಿಲ್ಲಾ ಪ್ರಶಸ್ತಿ”, “ಹಾರಾಡಿ ರಾಮ ಗಾಣಿಗ ಪ್ರಶಸ್ತಿ”, “ಯಕ್ಷಗಾನ ಕಲಾರಂಗ ಪ್ರಶಸ್ತಿ”,”ಯಕ್ಷಗಾನ ಪರಂಪರೆಯ ಪ್ರಶಸ್ತಿ”, ಹಾಗು ಹಲವಾರು ಸಂಘಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿ ಸುಮಾರು ಸಾವಿರಕ್ಕೂ ಅಧಿಕ ಸನ್ಮಾನ ಗೌರವವು 2020ನೇ ಸಾಲಿನ ಯಕ್ಷಗಾನ ಅಕಾಡಮಿಯ “ಯಕ್ಷಸಿರಿ ಪ್ರಶಸ್ತಿ”ಯು ಶ್ರೀಯುತರನ್ನು ಅರಸಿ ಬಂದಿದೆ. ಪ್ರಸ್ತುತ ಶ್ರೀಯುತ ಸರ್ವೋತ್ತಮ ಗಾಣಿಗರು ಮಡದಿ ಲಲಿತರ ಕರ ಪಿಡಿದು ಮೂರೂ ಸುಪುತ್ರಿಯ ಪಡೆದು, ಇರ್ವ ಪುತ್ರರೊಂದಿಗೆ ಮಧ್ಯಮ ವರ್ಗದ ಸಿರಿವಂತರಲ್ಲದೆ ಹಾರಾಡಿಯಲ್ಲಿ ನೆಲೆಸಿದ್ದಾರೆ. ಶ್ರೀಯುತರು ಹೀಗೆ ಮುಂದಿನ ಜೀವನ ಸುಖಕರವಾಗಲಿ. ಶ್ರೀಯುತರಿಗೆ ನನ್ನ ಆರಾಧ್ಯ ದೇವರಾದ ಜಗನ್ಮಾತೆ ಚಾರ ಮಹಿಷಮರ್ದಿನಿ ಅಮ್ಮನವರು ಹಾಗು ಕಾಲ ಮಾತೆ ಸರಸ್ವತಿಯು ಮುಂದಿನ ಜೀವನ ಸುಖ ಸಂತೋಷದಿಂದ ಇರಲಿ ಎಂದು ಹಾರೈಸೋಣ.
✍️ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.