ಅಮ್ಚಿನಡ್ಕ (www.vknews.com) : ಕರ್ನಾಟಕದ ಮಣ್ಣಿನಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ರಣ ಕಹಳೆಯನ್ನು ಮೊಳಗಿಸಿದ SSF ದಿಟ್ಟ ಹೆಜ್ಜೆ, ಸ್ಪಷ್ಟ ಗುರಿಯೊಂದಿಗೆ 31 ವರ್ಷಗಳನ್ನು ಪೂರೈಸಿ 32ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ SSF ಅಮ್ಚಿನಡ್ಕ ಶಾಖೆಯ ವತಿಯಿಂದ ಬದಿಯಡ್ಕ ಸಿರಾಜುಲ್ ಹುದಾ ಮದರಸ ವಠಾರದಲ್ಲಿ ದಿನಾಂಕ 19 ಸೆಪ್ಟೆಂಬರ್ 2020 ಬೆಳಿಗ್ಗೆ ಸಮಯ 7:30 ಕ್ಕೆ ಧ್ವಜ ದಿನವನ್ನು ಆಚರಿಸಲಾಯಿತು. ಸಿರಾಜುಲ್ ಹುದಾ ಮದರಸ ಉಸ್ತಾದ್ ಅಬೂಬಕ್ಕರ್ ಮುಸ್ಲಿಯಾರ್ ರವರು ದ್ವಜಾರೋಹಣಗೈದರು.
ಎಸ್ಸೆಸ್ಸೆಫ್ ಕರ್ನಾಟಕ ಮೂವತ್ತೊಂದು ಸಂವತ್ಸರಗಳನ್ನು ಪೂರೈಸಿಕೊಂಡು ಮೂವತ್ತೆರಡನೇ ವರ್ಷಕ್ಕೆ ಕಾಲಿಡುತ್ತಿರುವ ಶುಭ ಸಂದರ್ಭದಲ್ಲಿ ಇಬ್ರಾಹಿಂ ಮಸ್ಲಿಯಾರ್ ಬದಿಯಡ್ಕ ರವರು ಮಾತನಾಡುತ್ತಾ ಮುಂದಿನ ದಿನಗಳಲ್ಲೂ ಸಮಾಜ, ಸಮುದಾಯದ ನಡುವೆ ಸಂಘಟನೆಯು ಇನ್ನಷ್ಟು ಯಶಸ್ವಿಯಾಗಿ ಮುನ್ನೇರಲಿ ಎಂದು ಹಾರೈಸಿ ಎಲ್ಲರಿಗೂ SSF ಧ್ವಜ ದಿನದ ಶುಭಾಶಯಗಳನ್ನು ಸಲ್ಲಿಸಿದರು. ಸಯ್ಯದ್ ಶಾಹುಲ್ ಹಮೀದ್ ಮದನಿ ತಂಙಳ್ ಮಾಂತೂರು ಇವರು ದುಆ ನೆರವೇರಿಸಿದರು. ನಂತರ SSF ಧ್ವಜ ದಿನದ ಪ್ರಯುಕ್ತ ನೆರೆದವರಿಗೆಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ SYS ನೇತಾರರಾದ ಬಿ.ಮೂಸಾ ಅಮ್ಚಿನಡ್ಕ, ಬಶೀರ್ ಮುಸ್ಲಿಯಾರ್ , ಅಬ್ದುಲ್ ಖಾದರ್ ಬಿ.ಎ, ಹಾಗೂ ಸದಸ್ಯರು SSF ಅಮ್ಚಿನಡ್ಕ ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸಿರಾಜುಲ್ ಹುದಾ ಮದರಸ ಬದಿಯಡ್ಕ ವಿದ್ಯಾರ್ಥಿಗಳು ಪಾಲ್ಗೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.