ದಮ್ಮಾಮ್(ವಿಶ್ವಕನ್ನಡಿಗ ನ್ಯೂಸ್): ದಾದ ಬಾಯ್ ಟ್ರಾವೆಲ್ಸ್ ಪ್ರಯೋಜಕತ್ವದ , ಬ್ಲಡ್ ಡೋನರ್ಸ್ ಸಹಕಾರದೊಂದಿಗೆ ದಮ್ಮಾಮ್’ನಿಂದ ತಾಯ್ನಾಡಿಗೆ ಪ್ರಯಾಣ ಬೆಳೆಸಿದ ಚಾರ್ಟಡ್ ವಿಮಾನ ರಾತ್ರಿ 9 ಘಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿತು.
ಅನಿವಾಸಿ ಭಾರತೀಯರ ನೋವನ್ನು ಅರಿತು ದಾದ ಬಾಯಿ ಪ್ರಾಯೋಜಕತ್ವದಲ್ಲಿ 3ನೇ ಚಾರ್ಟಡ್ ವಿಮಾನದ ವ್ಯವಸ್ಥೆಯನ್ನು ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯು ಕೈಗೊಂಡಿತ್ತು.
ಇಂದು ದೇಶ ವಿದೇಶಗಳಲ್ಲಿ ಪ್ರತಿಯೊಬ್ಬರ ನೋವಿಗೆ ತಕ್ಷಣ ಸ್ಪಂಧಿಸುವ ಹಾಗೂ ಅನಿವಾಸಿಗಳನ್ನು ಊರಿಗೆ ಕರೆತರಲು ಬೇಕಾದ ಎಲ್ಲಾ ಸಹಾಯವನ್ನು ಮಾಡುವ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆ ಕರಾವಳಿಗರ ಮನೆ ಮಾತಾಗಿದೆ.
ಮಂಗಳೂರಿಗೆ ಆಗಮಿಸಿದ ಅನಿವಾಸಿ ಭಾರತೀಯರನ್ನು ಸ್ವಾಗತಿಸಲು ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ,ಕಾರ್ಯದರ್ಶಿ ನವಾಝ್ ಕಲ್ಲರಕೋಡಿ,ಸದಸ್ಯರಾದ ದಾವೂದ್ ಬಜಾಲ್,ಇರ್ಫಾನ್ ಕಲ್ಲಡ್ಕ,ಶಾಹುಲ್ ಕಾಶಿಪಟ್ನಾ,ರಝ್ಝಾಕ್ ಸಾಲ್ಮರ,ಫಯಾಝ್ ಮೊಂಟೆಪದವು,ಫಾರೂಕ್ ರೋಮಾಂಟಿಕ್,ರಫೀಕ್ ಬಜ್ಪೆ,ರಿಝ್ವಾನ್ ಬಜ್ಪೆ,ತೌಫೀಕ್ ಕುಳಾಯಿ,ಮನ್ಸೂರ್ ಕೋಡಿಜಾಲ್,ಫಾರೂಕ್ ಬಿಗ್ ಗ್ಯಾರೇಜ್,ಇಕ್ಬಾಲ್ ಮೊಂಟೆಪದವು ಮೊದಲಾದವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿದರು.
ಮಾಧ್ಯಮ ವಿಭಾಗ:ಬ್ಲಡ್ ಡೋನರ್ಸ್ ಮಂಗಳೂರು(ರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.