ವಿಟ್ಲ,(ವಿಶ್ವ ಕನ್ನಡಿಗ ನ್ಯೂಸ್): ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹಿಂದುಳಿದ ದಲಿತ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಕಾಮುಕರನ್ನು, ಪ್ರಾಯಶಃ ಭಾಜಪ ಮುಖಂಡರುಗಳ ಆಪ್ತರಾದವರು ಮತ್ತು ಮೇಲ್ಜಾತಿಯಲ್ಲಿನ ಸವರ್ಣೀಯರು ಎಂಬ ಕಾರಣಕ್ಕಾಗಿ ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥನ ಸರಕಾರ ರಕ್ಷಣೆ ಮಾಡುತ್ತಿರುವುದನ್ನು ಮಾತ್ರವಲ್ಲದೆ,ಅತ್ಯಾಚಾರವೆಸಗಿ ಬೆನ್ನು ಮೂಳೆ ಮುರಿದು, ನಾಲಿಗೆಯನ್ನೂ ಕತ್ತರಿಸಲ್ಪಟ್ಟ ಆ,ದಲಿತ ಹೆಣ್ಣು ಮಗುವಿನ ಶವವನ್ನು ಕೂಡಾ, ಕುಟುಂಬಸ್ಥರಿಗೆ ಬಿಟ್ಟುಕೊಡದ, ಉತ್ತರ ಪ್ರದೇಶದ ಆಡಳಿತ ವರ್ಗವು ಅನ್ಯಾಯ, ಅಕ್ರಮ ಮತ್ತು ಅತ್ಯಾಚಾರಕ್ಕೆ ಒಳಗಾದ, ಆ ಬಡ ಹೆಣ್ಣಿನ ಕುಟುಂಬಿಕರ ಮೇಲೆಯೇ ಪೋಲೀಸರನ್ನು ಚೂ ಬಿಟ್ಟು ಗೂಂಡಾಗಿರಿ ನಡೆಸುತ್ತಿರುವುದನ್ನು ಖಂಡಿಸಿ ಇಂದು ಡಿ.ವೈ.ಎಫ್.ಐ ಹಾಗೂ ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಹಾಗೂ ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ವಿಟ್ಲ ದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಚಿಂತಕರಾದ ಅಬ್ದುಲ್ ಖಾದರ್ ಕುಕ್ಕಾಜೆಯವರು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು,ನಡೆದುಕೊಂಡ ರೀತಿ, ನಾಚಿಕೆಗೇಡಿನ ವಿಚಾರ, ಆದ್ದರಿಂದ ಇಲ್ಲಿನ ನಮ್ಮ ಹೋರಾಟ ಯಾವುದೇ ಪಕ್ಷ, ಸಂಘಟನೆಗಳಿಗೆ ಸೀಮಿತವಲ್ಲ ಮತ್ತು ಇದು ಯಾವುದೇ ಒಂದು ವರ್ಗದ ವಿರುದ್ದವೂ ಅಲ್ಲ, ಬದಲಾಗಿ ಅನ್ಯಾಯ, ಅಕ್ರಮದ ವಿರುದ್ಧವಾಗಿರಬೇಕಾಗಿರುವುದು ಮಾನವನ ಸಹಜಧರ್ಮ ಹಾಗಿರುವಾಗ, ಮಾನವೀಯತೆಯ ನೆಲೆಯಲ್ಲಿ ಇದರಲ್ಲಿ ಎಲ್ಲರೂ ಸಹಕರಿಸೋಣ, ಸಹಭಾಗಿಯಾಗೋಣವೆಂದು ಹೇಳಿದರು.
ಡಿ.ವೈ.ಎಫ್.ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಪ್ರಜಾ ಪರಿವರ್ತನಾ ವೇದಿಕೆಯ ಬಿ.ಟಿ.ಕುಮಾರ್,ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಪುತ್ತೂರು ವಲಯದ ಕಾರ್ಯದರ್ಶಿಯವರಾದ ಇಸಾಕ್ ನೀರ್ಕಜೆ, ದಲಿತ್ ಸೇವಾ ಸಮಿತಿಯ ಬಿ.ಕೆ. ಸೇಸಪ್ಪ ಬೆದ್ರಕಾಡು ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ , ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಮಹಿಳಾ ವಿಭಾಗದ ಅಧ್ಯಕ್ಷೆ ಅಶುರಾ ಬಿ.ವಿ. ಡಿವೈಎಫ್ಐ ಮುಖಂಡರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ಮುಂತಾದವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ನಮ್ಮ ದೇಶವು ಹಂತ ಹಂತವಾಗಿ ಪ್ಯಾಸಿಸಮ್ ಪ್ರತಿಪಾದಕರ ಮೂಲಕ ಸರ್ವಾಧಿಕಾರಿ ವ್ಯವಸ್ಥೆಯ ಕೂಪಕ್ಕೆ ಬೀಳುವ ಅಪಾಯಕಾರಿ ಬೆಳವಣಿಗೆಯನ್ನು ಇದು ಸೂಚಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಮುಖಂಡರಾದ ಹೈದರಾಲಿ ನೀರ್ಕಜೆ,ಅಬ್ದುಲ್ ರಹಿಮಾನ್ ವಿ.ಕೆ. ಡಿ.ವೈ.ಎಫ್.ಐ ವಿಟ್ಲ ವಲಯ ಅಧ್ಯಕ್ಷರಾದ ನುಜುಮ್ ಅಳಿಕೆ, ಮಹಮ್ಮದ್ ಆಲಿ ಮದಕ,ಭಾಷಿಮ್ ಉಕ್ಕುಡ, ಪ್ರಜಾ ಪರಿವರ್ತನಾ ವೇದಿಕೆ ಮುಖಂಡರಾದ ಕೃಷ್ಣಪ್ಪ ಪುದ್ದೊಟ್ಟು, ಕಾರ್ಮಿಕ ಮುಖಂಡರಾದ ಲಿಯಾಕತ್ ಖಾನ್ ಮುಂತಾದವರು ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.