ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲೂ ಭಾರತದ ಗಡಿ ನುಸುಳಿದ ಚೀನಾ ಈ ಮೂಲಕ ತನ್ನ ವಿಸ್ತರಣೆಯ ದುರಾಸೆಯನ್ನು ತೋರಿಸಿಕೊಟ್ಟಿದೆ.ಭಾರತದ ಇದನ್ನು ಎದುರಿಸಲು ಮತ್ತಷ್ಟು ಶಕ್ತಿಯುತವಾಗಬೇಕಿದೆ,ನೆರೆಯ ರಾಷ್ಟ್ರಗಳನ್ನು ತನ್ನ ಬಾಂಧವ್ಯವನ್ನು ಉತ್ತಮಗೊಳಿಸಬೇಕಿದೆ ಎಂದು ವಿಜಯ ದಶಮಿ ಸಂದರ್ಭ ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಭಾಷಣದಲ್ಲಿ ತಿಳಿಸಿದ್ದರು.ಕುತೂಹಲವೆಂದರೆ ಪ್ರಧಾನಿ ಮೋದಿ ಚೀನಾ ಗಡಿ ಆಕ್ರಮಣಗೈದು ನುಸುಳಿದ್ದಾಗಿ ಒಪ್ಪಿಕೊಂಡಿರಲಿಲ್ಲ ಮಾತ್ರವಲ್ಲ,ನುಸುಳಿಲ್ಲ ಎಂದು ಹೇಳಿಕೆ ನೀಡಿದ್ದರು.
ಚೀನಾದ ಸೈನಿಕರು ನುಸುಳಿ ಬಂದಿರುವ ದಾಖಲೆಗಳು ಲಭ್ಯವಿದ್ದರೂ ಸುಳ್ಳು ಹೇಳಿದ್ದ ಪ್ರಧಾನಿ ಮೋದಿಯ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದ ಆರೆಸ್ಸೆಸ್ ಮುಖ್ಯಸ್ಥರ ಭಾಷಣ ಇರಿಸು ಮುರಿಸನ್ನುಂಟು ಮಾಡಿದ್ದು,ಆರೆಸ್ಸೆಸ್ ಅವರ ಹೇಳಿಕೆಯನ್ನು ತಿದ್ದಿ ಟ್ವೀಟ್ ಮಾಡಿದೆ(ಅತಿಕ್ರಮಣಕ್ ಕಾ ಪ್ರಯಾಸ್ ಕಿಯಾ ಅಂದರೆ ನುಸುಳಲು ಪ್ರಯತ್ನಿಸಿದ್ದರು).ಅಂತೆಯೇ ಪ್ರಮುಖ ಸುದ್ದಿಸಂಸ್ಥೆ ಭಾಗ್ವತ್ ಮಾತುಗಳ ನೇರಪ್ರಸಾರ ಹಾಗು ಹೇಳಿಕೆಯ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.