ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯನ್ನು ಲಕ್ಷ್ಯವಾಗಿಟ್ಟು ಕಾರ್ಯ ಪ್ರವೃತ್ತವಾಗಿರುವ ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆಯ ದ.ಕ. ಜಿಲ್ಲಾ ಘಟಕವು 2019 ಜುಲೈ 5ರಂದು ಅಸ್ತಿತ್ವಕ್ಕೆ ಬಂದಿರುತ್ತದೆ.
ಇದೀಗ ದ ಕ ಜಿಲ್ಲೆಯಲ್ಲಿ ಹಲವು ತಾಲೂಕು ಸಮಿತಿಗಳು,ಬ್ಲಾಕ್ ಸಮಿತಿ ಗಳು,ಗ್ರಾಮ ಸಮಿತಿ ಗಳು ಅಸ್ತಿತ್ವಕ್ಕೆ ಬಂದಿದೆ. ಅದರಂತೆ ಮಂಗಳೂರು ಹಾಗೂ ಮೂಡಬಿದಿರೆ ತಾಲೂಕು ಸಮಿತಿ ಘೋಷಣಾ ಸಮಾವೇಶವು 2020 ನವೆಂಬರ್ 1 ಆದಿತ್ಯ ವಾರ ಬೆಳಗ್ಗೆ 9.30 ಗಂಟೆ ಗೆ ಮಿಸ್ಬಾಹ್ ಆಡಿಟೋರಿಯಂ ಮಿಸ್ಬಾಹ್ ಕಾಲೇಜು ಕಾಟಿಪಳ್ಳ ದಲ್ಲಿ ಹಾಗೂ ಸಾಯಂಕಾಲ 4.00 ಕ್ಕೆ ಸಮಾಜ ಮಂದಿರ ಮೂಡಬಿದಿರೆಯಲ್ಲೂ ನಡೆಯಲಿದೆ.
ಕಾರ್ಯಕ್ರಮ ದಲ್ಲಿ ರಾಜ್ಯ ಉಪಾಧ್ಯಕ್ಷ ಎಚ್ ಐ ಅಬೂಸುಫ್ಯಾನ್ ಮದನಿ,ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸ ಅದಿ ಬೆಂಗಳೂರು, ಜಿಲ್ಲಾಕಾರ್ಯಾಧ್ಯಕ್ಷ ಎಸ್ ಎಮ್ ರಷೀದ್ ಹಾಜಿ,ಪ್ರಧಾನ ಕಾರ್ಯದರ್ಶಿ ಬಿ ಎಂ ಮುಮ್ತಾಜ್ ಅಲಿ, ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ , ಎಸ್ಇಡಿಸಿ ರಾಜ್ಯಾಧ್ಯಕ್ಷ. ಕೆಕೆಎಂ ಕಾಮಿಲ್ ,ಸಾದಿಖ್ ಮಾಸ್ಟರ್ ಮಲೆಬೆಟ್ಟು ಹಾಗೂ ವಿವಿಧ ಮೊಹಲ್ಲಗಳ ಗಣ್ಯ ನಾಯಕರು ಗಳು ಭಾಗವಹಿಸುವರು.ಎಂದು ಜಿಲ್ಲಾ ಕೋ ಆರ್ಡಿನೇಟರ್ ಅಶ್ರಫ್ ಕಿನಾರ ಪತ್ರಿಕೆಗೆ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.