ಅಬುಧಾಬಿ (www.Vknews.in) : ಶಾಂತಿ ಹುಡುಕುವವರಿಗೆ ಮತ್ತು ಮಾನವ ಸ್ನೇಹಿಗಳಿಗೆ ಪ್ರವಾದಿವರ್ಯರು ಅತ್ಯುತ್ತಮ ಮಾದರಿಯಾಗಿದ್ದಾರೆ ಎಂದು ಮುಹಮ್ಮತ್ ಅಬುಧಾಬಿ “ಜಲ್ಸೆ ಮವದ್ದ ೨೦೨೦ ಮಿಲಾದ್ ಸಂಗವi ದಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಫ್ರಾನ್ಸಿನಲ್ಲಿ ಪ್ರವಾದಿ (ಸ)ರವರ ವ್ಯಂಗ್ಯ ಚಿತ್ರ ಬಿಡಿಸಿರುವುದು ಖಂಡನಾರ್ಹ, ಆದರೆ ಆ ಹೆಸರಿನಲ್ಲಿ ನಡೆಯುವ ಕೋಮು ಗಲಭೆಗಳು ಸಮ್ಮತಾರ್ಹವಲ್ಲ. ಆದರ್ಶವನ್ನು ಆದರ್ಶದಿಂದಲೇ ಎದುರಿಸಬೇಕು. ಅದಾಗಿದೆ ಪ್ರವಾದಿ ಆದರ್ಶ ಎಂಬ ಸಂದೇಶವನ್ನು ಕಾರ್ಯಕ್ರಮ ನೀಡಿತು. ಮುಹಿಮ್ಮತ್ ಅಬುಧಾಬಿ ಸಮಿತಿಯು ‘ಪುಣ್ಯ ಪ್ರವಾದಿ (ಸ) ಅನುಪಮ ವ್ಯಕ್ತಿತ್ವ’ ಎಂಬ ಶೀರ್ಷಿಕೆಯಡಿಯಲ್ಲಿ ಆನ್ಲೈನ್ ಮಿಲಾದ್ ಸಮ್ಮೇಳನ “ಜಲ್ಸೇ ಮವದ್ದ-೨೦” ಇತ್ತೀಚೆಗೆ ಆಯೋಜಿಸಿತ್ತು.
ಮೌಲಿದ್ ಮಜ್ಲಿಸಿಗೆ ಮುಹಿಮ್ಮಾತ್ ವಿದ್ಯಾರ್ಥಿಗಳು ಹಾಗು ಬುರ್ದಾ ಆಲಾಪನೆಗೆ ಅಬ್ದುಸ್ಸಮದ್ ಅಮಾನಿ ಪಟ್ಟುವಂ ನೇತೃತ್ವ ನೀಡಿದರು. ಸಯ್ಯಿದ್ ಹಾಮಿದ್ ಅನ್ವರ್ ಅಲ್ ಅಹ್ದಲ್ರವರ ದುಆಃದೊಂದಿಗೆ ಪ್ರಾರಂಭವಾದ ಸಭೆಯನ್ನು ಐಸಿಎಫ್ ಜಿಸಿಸಿ ಚರ್ಮಾನ್ ಅಬ್ದುಲ್ ಅಝೀಝ್ ಸಖಾಫಿ ಮಂಬಾಡ್ ಉದ್ಘಾಟಿಸಿದರು, ಚಯರ್ಮಾನ್ ಹಾಜಿ ಇಕ್ಬಾಲ್ ಕುಂದಾಪುರ ಅಧ್ಯಕ್ಷತೆ ವಹಿಸಿದರು. ಸಮಾರೋಪ ಪ್ರಾರ್ಥನೆಗೆ ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹಿಮುಲ್ ಖಲೀಲುಲ್ ಬುಖಾರಿ ಖಡಲುಂಡಿ ನೇತೃತ್ವ ನೀಡಿದರು.
ಮುಹಿಮ್ಮಾತ್ ಅಬುಧಾಬಿ ಖದಮುಲ್ ಅಹ್ದಲಿಯಾ ಸಂಘದ ಮೂಲಕ ತಕಾಫುಲ್ಯೋಜನೆಯ ಸದಸ್ಯರಾದವರಿಗಿರುವ ಅನುಮೋದನಾ ಪ್ರಮಾಣ ಪತ್ರ ವಿತರಣೆಯನ್ನು ಮುಹಿಮ್ಮಾತ್ ಶೈಕ್ಷಣಿಕ ಕಾರ್ಯದರ್ಶಿ ಸೈಯ್ಯಿದ್ ಮುನೀರುಲ್ ಅಹ್ದಲ್ ನಿರ್ವಹಿಕೊಟ್ಟರು. ನೌಫಲ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಿದರು. ಸಯ್ಯದ್ ಶಿಹಾಬುದ್ದೀನ್ ತಂಙಳ್ ಕಡಲುಂಡಿ, ಸಯ್ಯಿದ್ ಹಾಮಿದ್ ಅನ್ವರ್ ಅಲ್ ಅಹ್ದಲ್, ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಅಬ್ದುಲ್ಲಕುಂಞÂ ಫೈಝಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮಾಜಿ ಶಾಸಕ ಮೊಯಿದೀನ್ ಬಾವ, ಸಿದ್ದೀಖ್ ಹಾಜಿ ಉಳುವಾರ್, ಹಮೀದ್ ಸಅದಿ, ಅಬ್ದುಲ್ ಹಮೀದ್ ಈಶ್ವರಮಂಗಲ, ಹಮೀದ್ ಪರಪ್ಪ, ಅಬ್ದುಲ್ ಲತೀಫ್ ಸಅದಿ (ರಿಯಾದ್) ಸಿದ್ದೀಕ್ ಸಖಾಫಿ (ದಮ್ಮಾಮ್) ಶುಭ ಹಾರೈಸಿದರು.
ಸ್ವಾಗತ ಸಂಘದ ಕನ್ವೀನರ್ ಕಮಾಲುದ್ದೀನ್ ಅಂಬ್ಲಮೊಗರು ಸ್ವಾಗತಿಸಿದರು ಮತ್ತು ಅಬೂಬಕರ್ ಸಿದ್ದೀಕ್ ಹಿಮಮಿ ಬಾಡೂರ್ ಧನ್ಯವಾದ ಅರ್ಪಿಸಿದರು.
ಫೋಟೋ:
ಮುಹಿಮ್ಮತ್ ಅಬುಧಾಬಿ ಸಮಿತಿಯು ‘ಪುಣ್ಯ ಪ್ರವಾದಿ (ಸ) ಅನುಪಮ ವ್ಯಕ್ತಿತ್ವ’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಿದ ಆನ್ಲೈನ್ ಮಿಲಾದ್ ಸಮ್ಮೇಳನ “ಜಲ್ಸೇ ಮವದ್ದ-೨೦” ಕಾರ್ಯಕ್ರಮಕ್ಕೆ ಕೇರಳ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹಿಮುಲ್ ಖಲೀಲುಲ್ ಬುಖಾರಿ ಖಡಲುಂಡಿ ನೇತೃತ್ವ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.