ಯಕ್ಷಗಾನ ಮೇರು ಕಲಾವಿದ ತನ್ನ ವಾಕ್ ಚಾತುರ್ಯದಿಂದ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಮಹನೀಯ ಶ್ರೀಯುತ ವಾಸುದೇವ ಸಾಮಗರು. ಯಾವುದೇ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ತನ್ನ ಜ್ಞಾನ ಕೋಶವನ್ನು ಎಲ್ಲರಿಗೂ ಬಿತ್ತರಿಸಿದ ಮಹನೀಯರು. ಯಕ್ಷಗಾನ ಕ್ಷೇತ್ರದಲ್ಲಿ ಆಟ-ಕೂಟದಲ್ಲಿ ಒಂದೊಂದು ಶಬ್ದಕ್ಕೂ ಅರ್ಥ ಬಿಡಿಸಿ ಬಿಡಿಸಿ ಹೇಳಿ ಎದುರಿರುವ ಪಾತ್ರಧಾರಿಗೂ ನಡುಕ ಹುಟ್ಟಿಸುವ ಮಹನೀಯ. ಆದರೆ ಅವರ ಜ್ಞಾನದ ಕೊರತೆಯು ಸಹ ಸರಸ್ವತಿ ಕೊಡಲಿಲ್ಲ. ಹಾಗು ಲೇಖನ, ಹರಿದಾಸರು, ಉತ್ತಮ ನಿರ್ದೇಶಕರು, ವಾಸುದೇವ ಸಾಮಗರು ಆಗಿದ್ದರು.
ಗದಾಯುದ್ಧ ಪ್ರಸಂಗದ ಕೌರವನಾಗಿ ತಾಳಮದ್ದಳೆಯಲ್ಲಿ ಕುಳಿತರೆ ಭಾಗವತರು ಹೇಳುವ ಒಂದೊಂದು “ಮರುತಸಂಭವನಿಂತು ಮೂದಲಿಸಿ ಬರುತಿರಲು” ಎಂಬ ಪದಕ್ಕೆ ಸಾಮಗರು ಅರ್ಥ ಹೇಳುವ ಪರಿ ಎಂದರೆ “ಪ್ರಥ್ವಿ ಗಂಧವತಿ, ಗಾಳಿ ಸ್ಪರ್ಶ ಗುಣ ಹೊಂದಿದ್ದು ಅಗ್ನಿ ಬಿಸುಪನ್ನು ಹೊಂದಿರುವಾದ್ದು, ನೀರು ರಸಕ್ಕೆ ಕಾರಣ, ಅಗಸ ಶಬ್ದವಾಗುವುದು, ಹೀಗೆ ನಭೋ ಮಂಡಲ ವ್ಯಾಪಿಸುವ ರೀತಿಯಲ್ಲಿ ಭೀಮ ಬೊಬ್ಬಿಡುತ್ತಾ ಬರುತ್ತಿದ್ದಾನೆ. ಅವನು ಯಾರು ವಾಯುದೇವನ ಮಗ” ಎಂದು “ಮರುತ ಸಂಭವ” ಎಂಬ ಶಬ್ದಕ್ಕೆ ಬಿಡಿ ಬಿಡಿಯಾಗಿ ಅರ್ಥ ಹೇಳುವ ಪರಿ ವಾಸುದೇವ ಸಾಮಗರಿಗೆ ಬಿಟ್ಟರೆ ಯಾರು ಇರಲಿಲ್ಲಕ್ಕೆ ಇಲ್ಲ. ಮುಂದೆ ಹುಟ್ಟಲು ಸಾಧ್ಯವಿಲ್ಲ. ಅಂತಹ ವಾಕ್ ಚತುರತೆಯಿಂದ ಪ್ರಸಿದ್ದಿ ಪಡೆದರು. ಹೀಗೆ ಉತ್ತಮವಾದ ನಾರಾಯಣ ಉಪ್ಪೂರು, ಪದ್ಮಶ್ರೀ ಚಿಟ್ಟಾಣಿ, ಕೋಟ ವೈಕುಂಠ, ಗೋಡೆ ನಾರಾಯಣ ಹೆಗ್ಡೆ, ನಗರ ಜಗನ್ನಾಥ ಶೆಟ್ಟಿ, ದೊಡ್ಡ ಸಾಮಗರು, ತೆಕ್ಕಟ್ಟೆ, ಮುರೂರು, ಶೇಣಿ, ಕುಂಬ್ಳೆ, ಮುಂತಾದವರ ಒಡನಾಟ ಹಾಗು ಯಕ್ಷಲೋಕ ವಿಜಯದ ಪ್ರದೀಪ, ಭಾನು ತೇಜಸ್ವಿ ಪ್ರಸಂಗದ ಭಾನುತೇಜ, ಶ್ರೀಕೃಷ್ಣ ಸಂಧಾನದ ಕೃಷ್ಣ, ಬ್ರಾಹ್ಮಣನಿಗೊಸ್ಕರ ತನ್ನ ತನುವನ್ನೇ ಕಡಿಯಲು ಮುಂದಾದ ಮಯೂರಧ್ವಜ, ಉತ್ತರ ಕುಮಾರ, ದಕ್ಷ,ಸಾಲ್ವ, ಪೌಂಡ್ರಿಕ, ಕಂಸ, ಶಲ್ಯ, ಮಂಥರೆ, ಅಂಬೆ, ಪ್ರಮೀಳೆ, ಮೋಹಿನಿ, ಹಿಡಿಂಬೆ,ದ್ರೋಣ, ಭೀಮ, ವಿಧುರ,ಕಾರ್ತವೀರ್ಯ, ಕೀಚಕ,ಇಂದ್ರಜಿತು, ಮುಂತಾದ ಪೌರಾಣಿಕ ಪಾತ್ರಗಳಲ್ಲಿ, ಹಾಗು “ನಾಗಶ್ರೀ” ಪ್ರಸಂಗದ ಶುಭ್ರಾಂಗ ಪಾತ್ರದಲ್ಲಿ ನ್ಯಾಯಕ್ಕಾಗಿ ಕೋರ್ಟಿನ ಸನ್ನಿವೇಶವನ್ನು ರಂಗಸ್ಥಳಕ್ಕೆ ತಂದ ಮಹನೀಯ. ಹೀಗೆ ಧರ್ಮಸ್ಥಳ, ಸಾಲಿಗ್ರಾಮ, ಕದ್ರಿ, ಸುರತ್ಕಲ್,ಸೌಕೂರು, ಬಗ್ವಾಡಿ ಮುಂತಾದ ಮೇಳದಲ್ಲಿ ತಿರುಗಾಟ ಮಾಡಿ ತನ್ನದೇ ಆದ “ಸಂಯಮ ” ಸಂಘಟನೆಯ ಯಕ್ಷಗಾನ ಯಕ್ಷಗಾನ ತಂಡವನ್ನು ಕಟ್ಟಿಕೊಂಡು ಕರ್ನಾಟಕ ರಾಜ್ಯದಾದ್ಯಂತ ಸಂಚಾರ ಮಾಡಿದರು. ಅಲ್ಲದೇ ಯಕ್ಷಗಾನ ತಾಳಮದ್ದಳೆ ಅನುಕೂಲವಾಗುವಂತೆ ತಾಳಮದ್ದಳೆಯ ಎಂಬತ್ತು ಪ್ರಸಂಗಗಳನ್ನು ಅರ್ಥ ಸಹಿತ ಸಂಪಾದಿಸಿದರು.
ಇವರ ಸಾಧನೆಯನ್ನು ಗುರುತಿಸಿಕೊಂಡು ಕರ್ನಾಟಕ ಯಕ್ಷಗಾನ ಅಕಾಡಮಿ ಪ್ರಶಸ್ತಿ, ಕೀಲಾರು ಗೋಪಾಲ ಕೃಷ್ಣಯ್ಯ ಪ್ರಶಸ್ತಿ, ಉಡುಪಿ ಕಲಾರಂಗ ಪ್ರಶಸ್ತಿ, ಮಟ್ಟಿ ಮರಳೀಧರ ರಾವ್ ಪ್ರಶಸ್ತಿ, ಯಕ್ಷ ಸಂಗಮ ಪ್ರಶಸ್ತಿ, ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು, ಸನ್ಮಾನಗಳು, ದೊರೆತಿವೆ. “ಜಾತಸ್ಯ ಮರಣಂ ದ್ರುವಂ” ಎನ್ನುವ ವೇದ ವಾಕ್ಯದಂತೆ ಇಂತಹ ಮೇರು ಪ್ರತಿಭೆಯ ಮಡದಿ ಮೀರಾ ಸಾಮಗ, ಪುತ್ರ ಡಾ. ಪ್ರದೀಪ ಸಾಮಗ, ಹಾಗು ಅಸಂಖ್ಯಾತ ಕಲಾಭಿಮಾನಿಗಳು ಕಳೆದು ನೋವಿನ ಸಂಗತಿ. ಕಾಲ ಕರೆದಾಗ ನಾವು ಮಾನವರು ಹೋಗುವುದು ಸಹಜ ಆದರೆ ಯಕ್ಷಗಾನದ ಅಮೂಲ್ಯ ಕೊಡುಗೆ ನೀಡಿದ ಮಹನೀಯರಿಗೆ ಅಶ್ರುತರ್ಪಣೆ ನೀಡುವುದು ಎಲ್ಲರ ಮನ ಮರುಗುವುದು ಸಹಜ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಲಾ ನುಡಿನಮನ ಸಲ್ಲಿಸೋಣ.
✍️ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.