68 ವಿದ್ಯಾರ್ಥಿನಿಯರಿಗೆಅಝ್ಝಾಹಿರ ಪದವಿ, ಮುಂದಿನ ಅಧ್ಯಯನ ವರ್ಷದಿಂದ ಉಚಿತ ಶಿಕ್ಷಣ
ಪುತ್ತೂರು (www.vknews.com) : ಪರ್ಲಡ್ಕ ಶಂಸುಲ್ ಉಲಮಾ ಮೆಮೋರಿಯಲ್ ವುಮೆನ್ಸ್ ಶರೀಅತ್ ಕಾಲೇಜಿನ ಐದನೇ ವಾರ್ಷಿಕ ಹಾಗೂ ಎರಡನೇ ಪದವಿ ಪ್ರಧಾನ ಸಮಾರಂಭ ಇತ್ತೀಚೆಗೆ ಪರ್ಲಡ್ಕ ಕಾಲೇಜು ಹಾಲ್ ನಲ್ಲಿ ನಡೆಯಿತು.
ಅಸ್ಸಯ್ಯಿದ್ ಹಾದೀ ತಂಙಳ್ ಅಲ್ ಮಶ್ಹೂರ್ ಮೊಗ್ರಾಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಉದ್ಘಾಟಿಸಿದರು.ಸಮಸ್ತ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂ ಟಿ ಅಬ್ದುಲ್ಲಾ ಮುಸ್ಲಿಯಾರ್ ಝಾಹಿರ ಪದವಿ ಪಡೆದ ಅರುವತ್ತ ಎಂಟು ವಿದ್ಯಾರ್ಥಿನಿಯರ ಪೋಷಕರಿಗೆ ಪದವಿ ಪತ್ರ ಪ್ರಧಾನ ಗೈದರು.ನಂತರ ಅನುಗ್ರಹ ಭಾಷಣ ಮಾಡಿದ ಅವರು ಮಹಿಳೆಯರು ಧಾರ್ಮಿಕ ಶಿಕ್ಷಣ ಪಡೆದಾಗ ಕೌಟುಂಬಿಕ ಜೀವನದಲ್ಲಿ ಯಶಸ್ಸು ಪಡೆಯುವುದರೊಂದಿಗೆ ಪಾರತ್ರಿಕ ಜೀವನದಲ್ಲೂ ವಿಜಯಗಳಿಸಲು ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ .ಎಸ್ ಹಂಝ ಹಾಜಿಯವರು, ವಿದ್ಯಾರ್ಥಿಗಳಲ್ಲಿ ಕಲಿಕೆ ಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡು ವರ್ಷಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಇಂದು ತಲಾ ಹತ್ತು ಗ್ರಾಂ ತೂಕ ಚಿನ್ನ ಬಹುಮಾನವನ್ನು ನೀಡಲಾಗಿದೆ.ಮಾತ್ರವಲ್ಲದೆ ಮುಂದಿನ ಅಧ್ಯಯನ ವರ್ಷದಿಂದ ಶರೀಅತ್ ಕಲಿಯಲಿಚ್ಚಿಸುವ ಎಲ್ಲಾ ವಿದ್ಯಾರ್ಥಿನಿಯರಿಂದ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ವಿಧ್ಯಾಭ್ಯಾಸ ನೀಡಲಾಗುವುದೆಂದು ಘೋಷಿಸಿದರು .ಮುಂದಿನ ಅಧ್ಯಯನ ವರ್ಷದಿಂದ ಶಂಸುಲ್ ಉಲಮಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾಗಿ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಖತೀಬ್ ಅಬ್ದುಲ್ ರಶೀದ್ ರಹ್ಮಾನಿ ಸಾಂದರ್ಭಿಕವಾಗಿ ಮಾತನಾಡಿದರು.ಕಾಲೇಜು ಸಮಿತಿ ಉಪಾಧ್ಯಕ್ಷರಾದ ಉಮರ್ ದಾರಿಮಿ ಸಾಲ್ಮರ ಸ್ವಾಗತಿಸಿದರು.ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ, ಉಪಾಧ್ಯಕ್ಷರಾದ ಇಬ್ರಾಹಿಂ ಗೋಳಿಕಟ್ಟೆ, ಕಾರ್ಯದರ್ಶಿ ಗಫೂರ್ , ಕೋಶಾಧಿಕಾರಿ ಶಕೂರ್ ಹಾಜಿ, ರಾಜ್ಯ ಫೈಝೀಸ್ ಅಧ್ಯಕ್ಷರಾದ ಉಸ್ಮಾನ್ ಫೈಝಿ ತೋಡಾರು, ಕಾಲೇಜು ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್,ಅಧ್ಯಾಪಕರಾದ ಜಲಾಲ್ ದಾರಿಮಿ, ಯೂಸುಫ್ ಫೈಝಿ, ಹನೀಫ್ ಮುಸ್ಲಿಯಾರ್, ಉಸ್ಮಾನ್ ಮುಸ್ಲಿಯಾರ್, ಜಮಾಅತ್ ಕಮಿಟಿ ಪದಾಧಿಕಾರಿಗಳು,ಕಾಲೇಜು ಸಮಿತಿ ಪದಾಧಿಕಾರಿಗಳು,ಯಂಗ್ ಮೆನ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.ಮೆನೇಜರ್ ಮುಸ್ತಫಾ ಫೈಝಿ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.