ಸೋಮವಾರಪೇಟೆ(ವಿಶ್ವಕನ್ನಡಿಗ ನ್ಯೂಸ್): ರಾಜ್ಯ ಸುನ್ನಿ ಮುಸಲ್ಮಾನರ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (SSF) ಇದರ ಸದಸ್ಯತ್ವ ಅಭಿಯಾನವು ಕರ್ನಾಟಕ ರಾಜ್ಯಾದ್ಯಂತ ನಡೆಯಲಿದ್ದು, ಇಂದು ಕೊಡಗು ಜಿಲ್ಲೆಯ ಹಲವಾರು ಯೂನಿಟ್ ಗಳಲ್ಲಿ ಚಾಲನೆ ನೀಡಲಾಯಿತು. ಹೃದಯವಿದೆಯಾ ಸತ್ಯದ ಧ್ವನಿಯಾಗಲು ಎಂಬ ಘೋಷವಾಕ್ಯದೊಂದಿಗೆ ನಡೆಯುವ ಸದಸ್ಯತ್ವ ಅಭಿಯಾನದ ಮೆಂಬರ್ಶಿಪ್ ಡೇ ಇಂದು 13/11/2020 ಶುಕ್ರವಾರ ಕೊಡಗು ಜಿಲ್ಲೆಯಾದ್ಯಂತ 90ರಷ್ಟು ಯೂನಿಟ್ ಗಳಲ್ಲಿ ನಡೆಯಿತು.
ಹಲವಾರು ಯೂನಿಟ್ ಗಳಲ್ಲಿ ಅಭಿಯಾನ ನಡೆಯಲಿದ್ದು ಸಾವಿರಾರು ಕಾರ್ಯಕರ್ತರು ಸೇರ್ಪಡೆಗೊಳ್ಳಲಿದ್ದಾರೆ . ಸೋಮವಾರಪೇಟೆಯ ಕರ್ಕಳ್ಳಿ ಶಾಖೆಯಲ್ಲಿ ಜಿಲ್ಲಾಧಕ್ಷರಾದ ಅಝೀಝ್ ಸಖಾಫಿ ಕೊಡ್ಲಿಪೇಟೆಯವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲೆಯಾದ್ಯಂತ ಹಲವಾರು ಯೂನಿಟ್ ಗಳಲ್ಲಿ ಸದಸ್ಯತ್ವ ದಿನ ನಡೆಸಲಾಯಿತು.
ರಾಜ್ಯ ಸುನ್ನಿ ಮುಸಲ್ಮಾನರ ಅತಿದೊಡ್ಢ ವಿದ್ಯಾರ್ಥಿ ಸಂಘಟನೆ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಇದರ ಸದಸ್ಯತ್ವ ಅಭಿಯಾನವು ನವೆಂಬರ್ 13ರಿಂದ 30ರವೆರೆಗೆ ನಡೆಯಲಿದ್ದು, 12ರಿಂದ 34 ವಯಸ್ಸಿನವೆರೆಗಿನ ಸುನ್ನಿ ಆಶಯಕ್ಕೆ ಬದ್ಧರಾಗಿರುವ ಯುವಕರಿಗೆ ಎಸ್ಸೆಸ್ಸೆಫ್ ಸದಸ್ಯತನ ನೀಡಲಿದೆ ಎಂದು ಎಸ್ಸೆಸ್ಸಫ್ ಕೊಡಗು ಜಿಲ್ಲಾ ಸಮಿತಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.