ಸೌದಿ ಅರೇಬಿಯಾ:(ವಿಶ್ವ ಕನ್ನಡಿಗ ನ್ಯೂಸ್) ಜುಬೈಲ್ ನ ಪ್ರತಿಷ್ಠಿತ ಕಂಪನಿ ಯುನೈಟೆಡ್ ಟೆಕ್ ನಲ್ಲಿ ಉತ್ತಮ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರು ಬೆಂಜನಪದವು ನಿವಾಸಿ ಇಸ್ಮಾಯಿಲ್ ಅಬ್ದುಲ್ ಹಮೀದ್(ಹನೀಫ್) ಎಂಬುವವರು ತಾ: ಜನವರಿ 30 ರಂದು ಅನಾರೋಗ್ಯದಿಂದ ಮರಣಹೊಂದಿರುತ್ತಾರೆ.
ಉತ್ತಮ ಗುಣ ನಡತೆಯ ವ್ಯಕ್ತಿತ್ವ ಹೊಂದಿದ್ದ ಇವರು ಸಾಂತ್ವನ ಹಾಗೂ ಹಲವಾರು ಸಂಘ ಸಂಸ್ಥೆ ಸ್ಥಾಪನೆಗಳಿಗೆ ಸಹಾಯಸ್ತ ನೀಡುತ್ತಿದ್ದ ಕೊಡುಗೈ ದಾನಿಯಾಗಿದ್ದರು. ಮೃತರು ತಾಯಿ, ಹೆಂಡತಿ ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮರಣೋತ್ತರ ಕ್ರಿಯೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕೂಡಲೆ ಸ್ಪಂದಿಸಿ ಕಾರ್ಯ ಪ್ರವರ್ತರಾದ. ಕರ್ನಾಟಕ ಕಲ್ಟರಲ್ ಫೌಂಡೇಶನ್ (ಕೆ.ಸಿ.ಎಫ್) ಜುಬೈಲ್ ಹಾಗು ದಮ್ಮಾಮ್ ಝೋನ್ ಸಾಂತ್ವನ ತಂಡವು ಭಾರತೀಯ ರಾಯಬಾರಿ ಕಛೇರಿ ಹಾಗೂ ಊರಿನಿಂದ ಬೇಕಾದ ದಾಖಲೆ ಪತ್ರವನ್ನು ತ್ವರಿತ ವೇಗದಲ್ಲಿ ಸರಿಪಡಿಸಿ ಕೇವಲ 1 ದಿವಸಗಳೊಳಗೆ ಜನವರಿ 31ರಂದು ಮಗ್ರಿಬ್ ನಮಾಜಿನ ಬಳಿಕ ಜುಬೈಲ್ ನಲ್ಲಿ ದಫನ ಕಾರ್ಯ ನಿರ್ವಹಿಸಲಾಯಿತು.
ಈ ಒಂದು ಉತ್ತಮ ಕಾರ್ಯದಲ್ಲಿ ಕೆ.ಸಿ.ಎಫ್ ನೊಂದಿಗೆ ಸಹಕರಿಸಿದ ಝೋನ್ ಸಾಂತ್ವನ ಕನ್ವೀನರ್ ಬಾಷಾ ಗಂಗಾವಳಿ, ಜುಬೈಲ್ ಸಾಂತ್ವನ ನಾಯಕರಾದ ನೌಫಲ್ ಮುಲ್ಕಿ, ಸಫ್ವಾನ್ ಮುಕ್ಕ, ಮತ್ತು ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ(ಇಬ್ಬ) ಬಜ್ಪೆ ಹಾಗೂ ಯುನೈಡೆಟ್ ಅಬ್ದುರ್ರಹ್ಮಾನ್ ಬಜ್ಪೆ ಇವರುಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಕೆ.ಸಿ.ಎಫ್ ಜುಬೈಲ್ ಶೋಲ ಸೆಕ್ಟರ್ ಅಧ್ಯಕ್ಷರಾದ ಅಬೂಬಕರ್ ಮದನಿ, ಹಾಗೂ ಹಲವು ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮೃತರಿಗಾಗಿ ದುಆ ನೆರೆವೇರಿಸಲಾಯಿತು.
ಸಾಂತ್ವನ ವಿಭಾಗ KCF ದಮ್ಮಾಮ್ ಝೋನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.