ಮಂಗಳೂರು(www.vknews.in): ಬದ್ರಿಯಾ ಮದ್ರಸ ಅಡ್ಡೂರು ಇದರ ವಠಾರದಲ್ಲಿ ಅಡ್ಡೂರು ಸೆಂಟ್ರಲ್ ಕಮಿಟಿ ವತಿಯಿಂದ ವಿದ್ಯಾರ್ಥಿಗಳಿಗೆ ನಾಗರಿಕಾ ಸೇವೆ ಮತ್ತು ಸರ್ಕಾರಿ ಉದ್ಯೋಗದ ಕುರಿತ ಮಾಹಿತಿ ಶಿಬಿರ ಮತ್ತು ತರಬೇತಿ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಸ್ಪರೆಂಟ್ ಕನ್ಸಲ್ಟನ್ಸಿ ಬೆಂಗಳೂರು ಇದರ ಕೋ ಅಡಿನೇಟರ್ ನಿಝಾಮುದ್ದೀನ್ ಹಾಗೂ ಅಕ್ಸೆಸ್ ಇಂಡಿಯಾ ಇದರ ಟ್ರೇನರ್ ಮುಫೀಝ್ ವಿಧ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸೆಂಟ್ರಲ್ ಅಧ್ಯಕ್ಷರಾದ ಎಂ ಶರೀಫ್ , ಉಪಾಧ್ಯಕ್ಷರಾದ ಎ.ಪಿ.ಮಹಮ್ಮದ್, ಕಾರ್ಯದರ್ಶಿ ಮನ್ಸೂರ್ ಜಮಾಅತ್ ಕಮಿಟಿ ಅಧ್ಯಕ್ಷರಾದ ಅಹಮದ್ ಬಾವ ,ಉಪಾಧ್ಯಕ್ಷ ಝೈನ್ ಹೊಳೆಬದಿ ಭಾಗವಹಿಸಿದ್ದರು. ಶಿಬಿರದಲ್ಲಿ ಸುಮಾರು 30 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವರದಿ: ನಝೀರ್ ಪಿ.ಸಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.