ಅಗರ್ತಲಾ(www.vknews.in): ಬಿಜೆಪಿ ಪಕ್ಷವನ್ನು ಭಾರತದಲ್ಲಿ ಸಂಘಟಿಸುವುದು ಮಾತ್ರವಲ್ಲದೆ ನೆರೆಯ ನೇಪಾಲ ಹಾಗೂ ಶ್ರೀಲಂಕಾದಲ್ಲಿಯೂ ವಿಸ್ತರಿಸುವ ಯೋಜನೆ ಅಮಿತ್ ಶಾರವರಿಗೆ ಇದೆ ಎಂಬ ಹೇಳಿಕೆ ನೀಡುವ ಮೂಲಕ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ಧಿಯಾಗುತ್ತಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ಅಗರ್ತಲಾದಲ್ಲಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ಭಾರತದಲ್ಲಿ ಬಿಜೆಪಿ ಸರ್ಕಾರ ರಚನೆಯ ಬಳಿಕ ನೆರೆಯ ನೇಪಾಳ ಹಾಗೂ ಶ್ರೀಲಂಕಾದಲ್ಲೂ ಪಕ್ಷ ಸಂಘಟಿಸಿ ಬಿಜೆಪಿ ಸರ್ಕಾರವನ್ನು ರಚಿಸುವ ಇರಾದೆಯನ್ನು ಗೃಹ ಸಚಿವ ಅಮಿತ್ ಶಾ ಹೊಂದಿದ್ದಾರೆ’ ಎಂದು ಬಿಪ್ಲವ್ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.