ವಿಟ್ಲ(www.Vknews.in): ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿ ಮಾಡಿಕೊಂಡು ಬಿಜೆಪಿ ಕೇಂದ್ರ ಸರಕಾರ ರೂಪಿಸಿದ ಸಂವಿಧಾನ ವಿರೋಧಿ ಕಾಯ್ದೆಗಳ ವಿರುದ್ಧ ಜನಾಂದೋಲನ ರೂಪಿಸುವಲ್ಲಿ ಯಶಸ್ವಿಯಾದ ಹೋರಾಟಗಾರ್ತಿ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ , ಪ್ರಚಂಡ ವಾಗ್ಮಿ ಶ್ರೀಮತಿ ಭವ್ಯ ನರಸಿಂಹಮೂರ್ತಿಯವರು ಬುಧವಾರದಂದು ವಿಟ್ಲ ಸಮೀಪದ ಕೊಡಂಗಾಯಿ ಎಂಬಲ್ಲಿಗೆ ಆಗಮಿಸಿದರು,
ಅವರ ಅಪ್ಪಟ ಅಭಿಮಾನಿ ಸಮದ್ ಅಬುಧಾಬಿ ಇವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು, ಇವರನ್ನು ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂದೇಶ್ ಶೆಟ್ಟಿ ಬಿ, ಅನಿವಾಸಿ ಉದ್ಯಮಿ ಇಬ್ರಾಹಿಂ ಅರಫಾ, ಹಾಗೂ ನಾಡಿನ ಹಲವು ಸಂಘ ಸಂಸ್ಥೆಗಳ ನೇತಾರರಾದ ನಾಸಿರ್ ಕೊಡಂಗಾಯಿ, ಮಜೀದ್ ಟಿ ಎಮ್, ಹಾರಿಸ್ ಕೊಡಂಗಾಯಿ, ಇವರು ಹೂ ಗುಚ್ಛ ನೀಡಿ ಸ್ವಾಗತಿಸಿದರು, ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡ ಧೀರೆಯನ್ನು ವಿಟ್ಲ ಪಡ್ನೂರು ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಝರುದ್ದೀನ್ ಕೊಡಂಗಾಯಿ ಹಾಗೂ ಸಮಾರಂಭದ ತಾರೆ ಸಮದ್ ಅಬುಧಾಬಿ ಇವರು ಸ್ಮರಣಿಕೆ ನೀಡಿ ಅಭಿನಂದಿಸಿದರು, ಕೊನೆಯಲ್ಲಿ ಸತ್ತಾರ್ ಟಿಪ್ಪುನಗರ ಶುಭಹಾರೈಸಿ ವಂದಿಸಿದರು.
ವರದಿ:ಶರೀಫ್ ಮೇಲಂಗಡಿ,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.