ಬೀದರ್(ವಿಶ್ವಕನ್ನಡಿಗ ನ್ಯೂಸ್): ಬೀದರ್ ಜಿಲ್ಲೆಯ ಬಸವಕಲ್ಯಾಣ ಉಪಚುನಾವಣೆಯ ಕಾವು ಜೋರಾಗಿದೆ. ಸುಮಾರು ಅರವತ್ತು ಎಪ್ಪತ್ತರ ದಶಕದಿಂದ ಟಿಕೇಟ್ ವಿತರಿಸುವಲ್ಲಿ ದಲಿತ ಹಿಂದುಳಿದ ಮತ್ತು ಮೈನಾರಿಟಿ ಸಮುದಾಯಗಳನ್ನು ಕಡೆಗಣಿಸಲ್ಪಟ್ಟಿದ್ದು ಕಳೆದ ಬಾರಿ ತಳಸಮುದಾಯದ ಮಾನ್ಯ ದಿ. ಬಿ. ನಾರಾಯಣರಾವ್ ಅವರಿಗೆ ಟಿಕೇಟ್ ನೀಡಲಾಯಿತು.
ವಿಧಾನಸೌದದಲ್ಲಿ ಮಾತನಾಡುತ್ತ ನಾನು ಕರ್ನಾಟಕದ ಗಡಿ ಭಾಗದಿಂದ ಬಂದಿದ್ದೇನೆ ಎಂಬ ಮಾತಿನೊಂದಿಗೆ ಇಡೀ ಕರ್ನಾಟಕದ ಜನರ ಗಮನ ಸೆಳೆದರು. ತಳಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಯಶಸ್ವಿಯಾದರು.
ದುರಾದೃಷ್ಟವಶಾತ್ ಅವರು ಆ ಸ್ಥಾನ ಪೂರ್ಣಗೊಳಿಸಲು ಆಗಲಿಲ್ಲ. ಬಹು ದಿನದ ಬಳಿಕ ನೀಡಿದ ಪ್ರಾಶಸ್ತ್ಯವನ್ನು ಹೀಗೆ ಮುಂದುವರೆಸಿಕೊಂಡು ಹೋಗಬೇಕು. ಖಾಲಿಯಾದ ಜಾಗವನ್ನು ತುಂಬಲು ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳ ಸಮುದಾಯಕ್ಕೆ ಮೊದಲ ಆದ್ಯತೆ ಕೊಡಬೇಕು ಎಂಬ ಕಾರಣ ದಶಕಗಳ ಬಳಿಕ ನೀಡಿದ ಸಮುದಾಯಿಕ ಪ್ರತಿನಿಧಿತ್ವ ಪೂರ್ಣಗಳಿಸಬೇಕು. ಜಾತಿ ಸಂಕರವಾದ ಬಳಿಕ ಕುಲವನರಸುವರೆ ?” ಎಂದು ಪ್ರಶ್ನಿಸಿ ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಪಂಚಮರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು.
ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಇಂದಿಗೂ ಕಲ್ಯಾಣದಲ್ಲಿರುವದು ಪ್ರತಿಶತ 70% ತಳಸಮುದಾಯದ ಕಾಯಕ ಜೀವಿಗಳು. ಹಾಗಾಗಿ ತಳಸಮುದಾಯ ಕಡೆಗಣಿಸದೆ ಈ ಬಾರಿ ಚುನಾವಣಾ ಟಿಕೇಟ್ ವಿತರಣೆ ಮಾಡಬೇಕು ಎಂಬ ಆಗ್ರಹದೊಂದಿಗೆ ಎಲ್ಲ ರಾಜಕೀಯ ಪಕ್ಷದವರಿಗೆ ತಿಳಿಯ ಬಯಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಸಂಚಾಲಕರಾದ ಅರ್ಜುನ ಭದ್ರೆಯವರು ಹೇಳಿಕೆ ನೀಡಿದರು. ಮಹಾಂತೇಶ ಬಡದಾಳ, ಅಶ್ವಿನಿ ಮದನಕರ್, ಪೂಜಾ ಸಿಂಗೆ, ಮೌಲಾ ರವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.