ಬೋಳಿಯಾರು(www.Vknews.in): ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಬೋಳಿಯಾರು ಘಟಕ ಹಾಗೂ ಯೆನಪೋಯಾ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಸಹಯೋಗದೊಂದಿಗೆ ಬೋಳಿಯಾರಿನ ಸ್ವಾಗತ್ ಆಡಿಟೋರಿಯಂ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರವು ಪಾಪ್ಯುಲರ್ ಫ್ರಂಟ್ ಡೋನರ್ಸ್ ಫಾರಂ ಬೋಳಿಯಾರು ಘಟಕ ಇದರ ಉಪಾಧ್ಯಕ್ಷರಾದ ಜನಾಬ್ ! ಅಶ್ರಫ್ ಮೋನು ಇವರ ನೇತೃತ್ವದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ವಿದ್ವಾಂಸರಾದ ಅಝೀಝ್ ಮುಸ್ಲಿಯಾರ್ ರವರು ದುಆಃದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಬೋಳಿಯಾರು ಇದರ ಗೌರವಧ್ಯಕ್ಷರಾದ ರಹಿಮಾನ್ ಮಠರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಪಿ.ಎಫ್.ಐ ಕಲ್ಲಡ್ಕ ಡಿವಿಜನ್ ಅಧ್ಯಕ್ಷರಾದ ಸಿದ್ದೀಕ್ ಕಲ್ಲಡ್ಕ ಕಾರ್ಯಕ್ರಮವನ್ನು ಉದ್ದೇಶಿಸಿ ರಕ್ತದಾನ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಮುಖ್ಯ ಪ್ರಭಾಷಣ ಮಾಡಿದರು.
ಬೋಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜೆಸಿಂತಾ ಪಿಂಟೋ,ಯೆನಪೋಯಾ ಆಸ್ಪತ್ರೆ ಅಕೌಂಟೆಂಟ್ ಆರೀಫ್ ಕಾಫಿಕಾಡ್, ಬದ್ರಿಯಾ ಜುಮ್ಮಾ ಮಸೀದಿ ರಂತಡ್ಕ ಇದರ ಪ್ರಧಾನ ಕಾರ್ಯದರ್ಶಿಯಾದ ಆರ್.ಎಸ್ ಇಬ್ರಾಹಿಂ ಕಾರ್ಯಕ್ರಮವನ್ನು ಉದ್ದೇಶಿಸಿ ಹಿತವಚನ ನೀಡಿದರು.
ಕೊರೋನಾ ಸಂಧರ್ಭದಲ್ಲಿ ತನ್ನ ಜೀವದ ಹಂಗನ್ನು ತೊರೆದು ಜನರ ಸೇವೆಗೈದ ಆಶಾ ಕಾರ್ಯಕರ್ತೆಯರನ್ನು ಹಾಗೂ ಮಸೀದಿಯಲ್ಲಿ ಹಲವಾರು ವರ್ಷಗಳ ಸೇವೆಗೈದ ಹಿರಿಯ ಸಾಧಕರನ್ನು ಗುರುತಿಸಿ ಅತಿಥಿಗಳ ಸಮ್ಮುಖದಲ್ಲಿ ಅತ್ಯಂತ ಗೌರಯುತವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಬೋಳಿಯಾರು ಇದರ ಅಧ್ಯಕ್ಷರಾದ ಅಝೀಝ್ ಬೋಳಿಯಾರು,ಬೋಳಿಯಾರು ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ರಂತಡ್ಕ ಪಿ.ಎಫ್.ಐ ಮೆಲ್ಕಾರ್ ಡಿವಿಜನ್ ಪ್ರಧಾನ ಕಾರ್ಯದರ್ಶಿ ಮುಬಾರಕ್ ಕಾರಾಜೆ,ಕೇಂದ್ರ ಜುಮ್ಮಾ ಮಸೀದಿ ಅಮ್ಮೆಂಬಳ ಇದರ ಅಧ್ಯಕ್ಷರಾದ ಉಬೈದ್ ಅಮ್ಮೆಂಬಳ,ಎಸ್.ಡಿ.ಪಿ.ಐ ಬೋಳಿಯಾರು ಗ್ರಾಮ ಸಮಿತಿ ಇದರ ಅಧ್ಯಕ್ಷರಾದ ಶರೀಫ್ ಪಾಸ್ಟ್ ಪುಡ್ ಯೆನಪೋಯಾ ಬ್ಲಡ್ ಬ್ಯಾಂಕ್ ಮುಖ್ಯಸ್ಥೆ ದಿವ್ಯಾ ಕಾಮತ್,ಆರೋಗ್ಯ ಕಿರೀಯ ಸಹಾಯಕಿ ಪಿ.ಲಲಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಥಮಬಾರಿಗೆ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ದಾನಿಗಳು ನೂರಕ್ಕೂ ಅಧಿಕ ಯುನಿಟ್ ರಕ್ತವನ್ನು ನೀಡುವುದರ ಮೂಲಕ ಬೋಳಿಯಾರಿನಲ್ಲಿ ಇತಿಹಾಸ ನಿರ್ಮಿಸಿದರು.ಸರ್ವನ್ ಬೋಳಿಯಾರು ಸ್ವಾಗತಿಸಿ,
ಇರ್ಫಾನ್ ರಂತಡ್ಕ ನಿರೂಪಿಸಿದರು.ಸಿರಾಜ್ ಪಲ್ಲ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.