(www.vknews.com) : ಮಂಗಳೂರಿನ ಹೊರ ವಲಯದ ಪರಂಗಿಪೇಟೆ ಸಮೀಪದ ಮಸೀದಿಯೊಂದಕ್ಕೆ ರಾತ್ರಿ ಇರುಳಿನ ಮೆರೆಯಲ್ಲಿ ಪ್ರವೇಶಗೈದು ಮಸೀದಿ ಸಿಬ್ಬಂದಿಗೆ ಹಲ್ಲೆಗೈಯ್ಯಲು ಮುಂದಾದ ಭಯೋತ್ಪಾಕರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಮುಂದಾಗ ಬೇಕಿದೆ.
ಇಡೀ ನಾಡಿನ ಜನರಿಗಾಗಿ ಶಾಂತಿ ಪ್ರೀತಿಯ ಭೋದನೆ ಮಾಡುವ ಕೇಂದ್ರಗಳಾಗಿದೆ ಮಸೀದಿಗಳು. ಯಾವುದೇ ಧಾರ್ಮಿಕ ಆರಾಧನಾಲಯಕ್ಕೆ ಅಕ್ರಮ ಪ್ರವೇಶ ಮಾಡಿ ಅಲ್ಲಿನ ಸಿಬ್ಬಂದಿಗಳಿಗೆ ಹಲ್ಲೆ ಮಾಡುವುದು ಕೊಲೆ ಮಾಡುವುದು ಈ ಮೂಲಕ ಕೋಮು ಗಲಭೆ ಎಬ್ಬಿಸುವುದು ಭಯೋತ್ಪಾದನಾ ಕೃತ್ಯವಾಗಿದೆ. ಇದನ್ನು ಸರ್ವ ಧರ್ಮೀಯರೂ ಖಂಡಿಸ ಬೇಕಾಗಿದೆ. ಇಲ್ಲಿನ ಪ್ರತೀ ಧರ್ಮದ ಗುರುಗಳು ಮುಂದೆ ಬಂದು ಇಂತಹ ನೀಚ ಕೃತ್ಯ ಎಸಗುವವರನ್ನು ಸಮಾಜದಿಂದ ಬಹಿಷ್ಕರಿಸಲು ಕಾರ್ಯಪ್ರವೃತ್ತರಾಗ ಬೇಕಿದೆ.
ಹಿಂದೂ ಮುಸ್ಲಿಮರ ಮಧ್ಯೆ ಇರುವ ಸೌಹಾರ್ಧತೆಯನ್ನು ಹಾಳುಗೆಡವಿ ರಾಜಕೀಯ ಲಾಭಕೊಯ್ಯಲು ಪ್ರಯತ್ನಿಸುವ ಇಂತಹ ಕ್ಷುದ್ರ ಶಕ್ತಿಗಳನ್ನು ಮಟ್ಟ ಹಾಕಬೇಕಾದುದು ದೇಶದ ಅಭಿವೃದ್ದಿಯ ನಿಟ್ಟಿನಲ್ಲಿ ತುಂಬಾ ಅಗತ್ಯವಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸದಿದ್ದಲ್ಲಿ ಸಮಾನ ಮನಸ್ಕರ ಜೊತೆ ಸೇರಿ ಕಾನೂನು ರೀತ್ಯಾ ಉಗ್ರಪ್ರತಿಭಟನೆ ಮಾಡ ಬೇಕಾಗುತ್ತದೆ. ಇದಕ್ಕೆ ಕಾನೂನು ಪಾಲಕರು ಆಸ್ಪದ ನೀಡುವುದಿಲ್ಲ ಎಂಬ ನಂಬಿಕೆ ನಾಡಿನ ಜನತೆಗೆ ಇದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.