ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಉಲಮಾ ಒಕ್ಕೂಟದ ಉಪಾಧ್ಯಕ್ಷರೂ , ಸೂಫಿ ವರ್ಯರು ಪ್ರಮುಖ ವಿದ್ವಾಂಸರೂ, ಶೈಕ್ಷಣಿಕ ಸುದಾರಕರೂ ಆಗಿದ್ದು ಸಮುದಾಯದ ಏಳಿಗೆಗೆ ಅಪಾರ ಕೊಡುಗೆ ನೀಡಿದ್ದ ಶೈಖುನಾ ಎಂ.ಆಲಿಕುಂಞಿ ಮುಸ್ಲಿಯಾರ್ ಶಿರಿಯಾ ರವರು ಇಂದು ನಿಧನರಾದರು.
ಬಹುವರ್ಯರ ನಿಧನ ವಾರ್ತೆಯು ಅತೀವ ನೋವನ್ನು ತಂದಿದ್ದುಇವರ ನಿಧನಕ್ಕೆ ಬೆಳ್ಳಾರೆ ಸುನ್ನಿ ಸೌಹಾರ್ದ ವೇದಿಕೆ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಶ್ರೀಯುತರು ಪತ್ನಿ , 4.ಪುತ್ರರು, 4 ಪುತ್ರಿಯರು ಸೇರಿದಂತೆ ಸಾವಿರಾರು ಶಿಷ್ಯಂದಿರನ್ನು , ಅಪಾರ ಕುಟುಂಬಸ್ಥರನ್ನು, ಅಭಿಮಾನಿಗಳನ್ನು ಅಗಲಿದ್ದಾರೆ.
ಅಪಾರ ವಿದ್ವಾಂಸರರನ್ನು ಸಮೂಹಕ್ಕೆ ಅರ್ಪಿಸಿದ್ದ ಶೈಖುನಾರನ್ನು ಸಮಾಜ ತಾಜುಶ್ಶೇರಿಅಃ ಎಂದು ಕರೆಯುತ್ತಿತ್ತು.ಹಲವಾರು ಮೊಹಲ್ಲಾಗಳ ಖಾಝಿಯಾಗಿರುವ ಶೈಖುನಾ ರವರು ಹಲವಾರು ವರ್ಷಗಳಿಂದ ಕಾಸರಗೋಡು ಜಿಲ್ಲೆಯ ಪೊಯ್ಯತ್ತಬೈಲ್ ನಲ್ಲಿ ಧಾರ್ಮಿಕ ಸೇವೆ ನೀಡುತ್ತಾ ಬಂದಿದ್ದರು,ಅಲ್ ಬಯಾನ್ ಪತ್ರಿಕೆ ಸಂಪಾದಕರೂ ಆಗಿದ್ದ ಇವರ ಅಗಲುವಿಕೆಯು ಸಮಯದಾಯಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟ ವಾಗಿದೆ.
ಅಲ್ಲಾಹನು ಅವರು ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಶಿಷ್ಯಂದಿಯರಿಗೆ ಮತ್ತು ಅವರ ಅಭಿಮಾನಿಗಳಿಗೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ.
ಹಸೈನಾರ್ ಹಾಜಿ ಸಿ.ಎಂ ಅಧ್ಯಕ್ಷರು ಸುನ್ನಿ ಸೌಹಾರ್ದ ವೇದಿಕೆ ಬೆಳ್ಳಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.