ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಪ್ರಭಾಕರ ಭಟ್ರೇ, ಜಗದೀಶ ಕಾರಂತರವರೇ ಪ್ರಮೋದ್ ಮುತಾಲಿಕ್ ರವರೇ ಲಕ್ಷದಷ್ಟು ಮದರಸಗಳು ಕಾರ್ಯಾಚರಿಸುತ್ತಿರುವ ಮುಸ್ಲಿಂ ರಾಷ್ಟ್ರದಿಂದ ಓಕ್ಸಿಜನ್, ಸಿಲೀಂಡರ್, ಮೆಡಿಕಲ್ ಸಲಕರಣೆಗಳನ್ನು ಹೊತ್ತ ಬೃಹತ್ ನೌಕಾಪಡೆಯ ಹಡಗು ಭಾರತದ ವಿವಿಧ ರಾಜ್ಯಗಳಿಗೆ ತಲುಪಿದೆ. ಅದರಲ್ಲಿ ಕರ್ನಾಟಕದ ಮಂಗಳೂರಿಗೂ ತಲುಪಿದ ಸಂತೋಷದ ವಿಚಾರವನ್ನು ನಿಮ್ಮ ಮುಂದಿಡುತ್ತಿದ್ದೇನೆ.
ವೇದಿಕೆ ಸಿಕ್ಕಿದಾಗಲೆಲ್ಲ ಮುಸ್ಲಿಮರನ್ನು ಹೀನಾಯವಾಗಿ ನಿಂದಿಸಿ ಬೈದು ಭಯೋತ್ಪಾದಕರು, ಉಗ್ರಗಾಮಿಗಳು, ಗೋಕಳ್ಳರು, ಜಿಹಾದಿಗಳು, ಲವ್ ಜಿಹಾದಿಗಳು ಎಂದು ಹೇಳಲು ಇನ್ನಷ್ಟು ಶಕ್ತಿ ತುಂಬಲು ಮದರಸದಲ್ಲಿ ಮಾನವೀಯತೆ ಕಲಿತ ಮುಸ್ಲಿಮ್ ರಾಷ್ಟ್ರದ ರಾಜರು ನೆರವಾಗುತ್ತಿದ್ದಾರೆ. ಅವರಿಗೆ ನಿಮ್ಮ ಕೋಮುವಾದದ ಬಗ್ಗೆ ಗೊತ್ತಿಲ್ಲದೆ ಅಲ್ಲ. ಸುಳ್ಳಾರೋಪದ ಮೇಲೆ ಜೈಲಿಗಟ್ಟಿ ಕುಟುಂಬವನ್ನು ಅನಾಥರನ್ನಾಗಿ ಮಾಡಿದ್ದು ಗೊತ್ತಿಲ್ಲದೆ ಅಲ್ಲ. ಶಾಂತಿಯುತ ಪ್ರತಿಭಟನೆಯನ್ನು ಮಂಗಳೂರು ಗಲಭೆಯನ್ನಾಗಿ ಸೃಷ್ಟಿಸಿ ಅಮಾಯಕ ಎರಡು ಜೀವಗಳನ್ನು ಬಲಿತೆಗೆದುಕೊಂಡದ್ದು ಗೊತ್ತಿಲ್ಲದೆ ಅಲ್ಲ. ಸ್ವತ ರಾಜ್ಯದಲ್ಲಿ ಮುಖ್ಯಮಂತ್ರಿಯವರು ಘೋಷಿಸಿದ ಹತ್ತು ಲಕ್ಷ ಪರಿಹಾರವನ್ನು ಭಟ್ಟರೇ ನೀವು ಮತ್ತು ನಿಮ್ಮ ಪರಿವಾರ ಸೇರಿ ತಡೆಹಿಡಿದ ಅದೇ ಪ್ರದೇಶಕ್ಕೆ ನಿಮ್ಮ ನಮ್ಮ ಜೀವ ಅಪಾಯದಲ್ಲಿದೆ ಎಂದು ಅರಿತಾಗ ಮುಸ್ಲಿಂ ರಾಷ್ಟ್ರಗಳಿಂದ ಪರಿಹಾರ ಸಾಮಾಗ್ರಿಗಳು ಕಳುಹಿಸಿಕೊಡುತ್ತಿದ್ದಾರೆ. ನಾವದನ್ನು ತಡೆಯಲು ಹೋಗಲ್ಲ. ಕಾರಣ, ನಾವು ಮಾನವೀಯ ಮೌಲ್ಯಗಳನ್ನು ಕಲಿತವರು. ಅದನ್ನು ಪ್ರತಿಪಾದಿಸುತ್ತೇವೆ. ಅದು ಕಲ್ಲುಮುಳ್ಳಿನ ಹಾದಿಯನ್ನು ಸವೆಸಿಯಾದರೂ ಸರಿ. ಮನುಷ್ಯತ್ವಕ್ಕೆ ಬೆಲೆ ಕಲ್ಪಿಸುವ ನಮ್ಮ ಸೇವೆ ಅದು ಅಂತ್ಯ ದಿನದವರೆಗೂ ನೆಲೆಗೊಳ್ಳುತ್ತದೆ.
ಸೆಂಟ್ ಹಾಕಿದ ಅದೇ ಅರಬರು ಇಂದು ನಿಮಗೆ ಉಸಿರು ನೀಡುತ್ತಿದ್ದಾರೆ. ಬೇಡ ಎಂದು ಹೇಳಲು ಧೈರ್ಯವಿದೆಯಾ? ಇದನ್ನು ವಿರೋಧಿಸಿ ವೇದಿಕೆ ಕಟ್ಚಿ ಭಾಷಣ ಮಾಡಲು ಮೋದಿಯವರಿಗೆ ಪತ್ರ ಬರೆದು ಅರಬ್ ರಾಷ್ಟ್ರಗಳ ಮುಸ್ಲಿಮರಿಂದ ನಮಗೆ ಸಹಾಯ ಬೇಡ ಎಂದು ಹೇಳುವ ಧಮ್ ಇದೆಯಾ? ಮುಸ್ಲಿಮರಿಗೆ 57 ಮುಸ್ಲಿಂ ರಾಷ್ಟ್ರಗಳು ಇದೆ ಎಂದು ನಿಮ್ಮ ಭಾಷಣದಲ್ಲಿ ಹೇಳಿದ್ದೀರಿ ತಾನೇ?! ಅದೇ ಮುಸ್ಲಿಂ ರಾಷ್ಟ್ರಗಳು ನಿಮಗೆ ಚಟ್ಟ ಕಟ್ಟೋ ಸಮಯದಲ್ಲಿ ಉಸಿರು ಕೊಟ್ಟು ನೆರವಿಗೆ ಧಾವಿಸಿ ಬಂದಿದ್ದಾರೆ. ಮಂಗಳೂರಿನ ಉಳ್ಳಾಲವನ್ನು ಪಾಕಿಸ್ತಾನ ಎಂದು ಹೇಳಿ ಅವಮಾನ ಮಾಡಿದ್ದೀರಿ. ಆದರೆ, ನಿಮ್ಮ ಓಟ್ ಬ್ಯಾಂಕ್ ಪಾಕಿಸ್ತಾನವೇ ಭಾರತದ ಸಹಾಯಕ್ಕೆ ನಿಂತಿತು. ಅಂಬ್ಯುಲೆನ್ಸ್ ಉಚಿತವಾಗಿ ನೀಡಿ ಜೀವ ರಕ್ಷಿಣೆಗೆ ಸಹಾಯ ಮಾಡಿತು. ಯಾಕೆ ಅದನ್ನು ಹಿಂದೆ ಕಳುಹಿಸಲಿಲ್ಲ?
ಇಂದು ನಿಮಗೆ ಉಸಿರು ನೀಡಿದ ಅರಬರು, ಮಾನವೀಯತೆ ಕಲಿತದ್ದು ನೀವು ಭಯೋತ್ಪಾದನೆಯ ಕೇಂದ್ರವೆಂದು ಹೇಳುತ್ತಿರುವ ಮದರಸಗಳಲ್ಲಿ ಕಲಿತವರು. ಅದೇ ಮದರಸಗಳಲ್ಲಿ ನಾವು ಭಾರತೀಯರು ಕಲಿಯುತ್ತಿದ್ದೇವೆ. ಆದ್ದರಿಂದಲೇ, ನಿಮ್ಮ ಎಲ್ಲಾ ಅಪಪ್ರಚಾರಗಳನ್ನು ಮೆಟ್ಟಿ ನಿಂತು ಸಂಪೂರ್ಣವಾಗಿ ಕೋವಿಡ್ ಸಂತ್ರಸ್ತರ ನೆರವಿಗೆ ಹೋಗುತ್ತಿದ್ದೇವೆ. ಅನ್ನಾಹಾರವಿಲ್ಲದೆ ಹಸಿದ ಕುಟುಂಬಗಳಿಗೆ ಆಹಾರ ತಲುಪಿಸುತ್ತಿದ್ದೇವೆ. ಮೃತ ಶರೀರವನ್ನು ಹಿಂದೂ ಸಂಪ್ರದಾಯದಂತೆ ದಹನ ಮಾಡುತ್ತಿದ್ದೇವೆ. ನಾಯಿ ಹಂದಿ ಬೆಕ್ಕುಗಳಿಗೆ ಆಹಾರವಾಗೋ ಮೃತ ಶರೀರವನ್ನು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ದಹನ ಮಾಡಿ ಮಾನವೀಯತೆ ಮೆರೆಯುತ್ತಿದ್ದೇವೆ.
ಅಧಿಕಾರದಾಸೆಗಾಗಿ ಮುಸ್ಲಿಮರನ್ನು ಭಯೋತ್ಪಾದಕರನ್ನಾಗಿ ಚಿತ್ರೀಕರಿಸಿ ಮುಗ್ಧ ಅಮಾಯಕ ಹಿಂದೂ ಸಹೋದರರ ತಲೆಯಲ್ಲಿ ಕೋಮು ವಿಷಬೀಜವನ್ನು ಬಿತ್ತಿ ಇಂದಿಗೂ ಅವರಿಗೆ ಸುಳ್ಳಿನ ಕತೆಗಳನ್ನು ಹೇಳಿ ಜೈಶ್ರೀರಾಮ್ ಹೇಳಿಸಿ ಉದ್ರೇಕಗೊಳಿಸುವ ನಿಮ್ಮ ಚಾಳಿಯನ್ನು ಬಿಟ್ಟು ಬಿಡಿ. ರೋಗ ಸೋಂಕು ಇದ್ಯಾವುದೂ ಜಾತಿ ಧರ್ಮ ಕುಲ ಗೋತ್ರ ನೋಡಿ ಬರಲ್ಲ. ಉಸಿರುಗಟ್ಟಿದಾಗ ನೆರವಿಗೆ ಬರುವವರು ಜಾತಿ ಕೇಳಿಕೊಂಡು ಬರಲ್ಲ. ನಾಳೆ ನೀವೇ ಆನಾರೋಗ್ಯ ಪೀಡಿತರಾದರೂ ನಿಮ್ಮ ಸಹಾಯಕ್ಕೆ ನಾವು ಬಂದೇ ಬರುತ್ತೇವೆ. ನಿಮ್ಮನ್ನು ಉಳಿಸುವುದೊಂದೇ ನಮ್ಮ ಗುರಿ. ಅದಕ್ಕೆ ಜಾತಿ ಧರ್ಮ ಕುಲ ಗೋತ್ರ ಯಾವುದೂ ಅಡ್ಡಿಯಾಗಲ್ಲ. ಪ್ರಭಾಕರ ಭಟ್ಟರಿಗೆ ರಕ್ತ ಅಗತ್ಯವಿದೆ ರಕ್ತದಾನಿಗಳು ಬೇಕು ಎಂದು ಮೆಸೇಜ್ ಬಂದರೆ ಓಡೋಡಿ ಬರುವವರ ಸಾಲಿನಲ್ಲಿ ಖಂಡಿತವಾಗಿಯೂ ಮುಸ್ಲಿಮರಿರುತ್ತಾರೆ. ಜೀವನ್ಮರಣ ಹೋರಾಟದಲ್ಲಿ ಜಯಿಸಿ ಬಂದು ಕಣ್ಣು ಬಿಡುವಾಗ ಮೈಯಲ್ಲಿ ಹರಿಯುವ ರಕ್ತ ರಫೀಕ್ /ಖಾದರ್ ನದ್ದಾಗಿರಬಹುದು. ಓಕ್ಸಿಜನ್ ಬಹ್ರೈನ್/ ಮುಸ್ಲಿಂ ರಾಷ್ಟ್ರದ್ದಾಗಿರಬಹುದು.
ಕೊರೋಣ ಕಲಿಸಿದ ಮೊತ್ತ ಮೊದಲನೇ ಪಾಠ ಮಾನವೀಯತೆ. ಅದು ಇನ್ನೂ ನಾವು ಕಲಿಯದಿದ್ದರೆ ನಮ್ಮ ಜನ್ಮ ಸಾರ್ಥಕವಾಗಲಾರದು. ನಿಮ್ಮ ಹಿಂದಿನ ಭಾಷಣಗಳನ್ನೊಮ್ಮೆ ಆಲಿಸಿ ನೋಡಿ. ನೀವು ಬಿತ್ತಿದ ಕೋಮು ವಿಷಬೀಜಗಳು ಇನ್ನೂ ಕೂಡ ಮೊಳಕೆಯೊಡೆಯುತ್ತಲೇ ಇದೆ. ಮಂದಿರ ಮಸೀದಿ ಚರ್ಚ್ ಇಗರ್ಜಿ ಇದೆಲ್ಲವೂ ನಮ್ಮಲ್ಲಿ ತಿಳಿಸುವುದು ಮನಷ್ಯರನ್ನು ಪ್ರೀತಿಸಲು ಹೊರತು ದ್ವೇಷಿಸಲು ಅಲ್ಲ ಎಂಬ ಸತ್ಯವನ್ನು ಇನ್ನಾದರೂ ಅರಿಯರಿ.
✍🏻Nizzu4ever👁 ಉರುವಾಲು ಪದವು [email protected]
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.