(ವಿಶ್ವಕನ್ನಡಿಗ ನ್ಯೂಸ್): ಮುಸ್ಲಿಮರು ಅನಾಥ ಶವಗಳಿಗೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ಮಾಡಿದ್ದು ಆ ಸೂರ್ಯನಿಗೆ ಕಂಡರೂ ಈ ಸೂರ್ಯರಿಗೆ ಕಾಣಲಿಲ್ಲ.
ಮುಸ್ಲಿಂ ರಾಷ್ಟ್ರಗಳಿಂದ ಆಕ್ಸಿಜನ್ ಸಹಿತ ಅಗತ್ಯ ಸಹಾಯ ಹರಿದು ಬಂದಿರುವುದು ಆ ಸೂರ್ಯನಿಗೆ ಕಂಡರೂ ಈ ಸೂರ್ಯರಿಗೆ ಕಾಣಲಿಲ್ಲ.
ಬೀದಿ ಬದಿಯಲ್ಲಿರುವ ಹಸಿದ ಹೊಟ್ಟೆಯನ್ನು ತಣಿಸುವ ಮುಸ್ಲಿಮರು ಆ ಸೂರ್ಯನಿಗೆ ಕಂಡರೂ ಈ ಸೂರ್ಯರಿಗೆ ಕಾಣಲಿಲ್ಲ.
ರಕ್ತದಾನ, ಪ್ಲಾಸ್ಮಾ ದಾನ ಮಾಡಿ ಜೀವ ರಕ್ಷಕರಾಗಿರುವ ಮುಸ್ಲಿಮರು ಆ ಸೂರ್ಯನಿಗೆ ಕಂಡರೂ ಈ ಸೂರ್ಯರಿಗೆ ಕಾಣಲಿಲ್ಲ.
ಕ್ವಾರಂಟೈನ್ ಸೆಂಟರ್ ತೆರೆದು ರೋಗಿಗಳಿಗೆ ಆಶ್ರಯ ಕೊಟ್ಟ ಮಸೀದಿ, ಮದ್ರಸಗಳು ಆ ಸೂರ್ಯನಿಗೆ ಕಂಡರೂ ಈ ಸೂರ್ಯರಿಗೆ ಕಾಣಲಿಲ್ಲ.
ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡೋಡಿ ರೋಗಿಗಳಿಗೆ ಶುಶ್ರೂಷೆ ನೀಡುವ ಮುಸ್ಲಿಂ ಕೊರೋನಾ ವಾರಿಯರ್ಸ್ ಆ ಸೂರ್ಯನಿಗೆ ಕಂಡರೂ ಈ ಸೂರ್ಯರಿಗೆ ಕಾಣಲಿಲ್ಲ.
ಈ ಸೂರ್ಯರಿಗೆ ಕಂಡದ್ದು 206 ಮಂದಿ ಇರುವ ವಾರ್ ರೂಮ್ ನಲ್ಲಿ ಕೇವಲ 17 ಮಂದಿ ಮುಸ್ಲಿಮರು ಮಾತ್ರ ವಾವ್, ಅದ್ಭುತ! ಅತ್ಯದ್ಭುತ! ಅನುಪಮ! ಅನನ್ಯ! ಎಂತಹ ಹುಡುಕಾಟ! ಎಂತಹ ಆಪರೇಷನ್! ಮೆಚ್ಚಲೇಬೇಕು.
ಈ ಮನಸ್ಥಿತಿಯನ್ನು ಅರಿತೇ ಕನ್ನಡದ ಕವಿಯೊಬ್ಬರು ಬರೆದ ಸಾಲುಗಳು
ಹಚ್ಚುವುದಾದರೆ ದೀಪವನ್ನು ಹಚ್ಚು. ಬೆಂಕಿಯನ್ನಲ್ಲ. ಆರಿಸುವುದಾದರೆ ನೋವನ್ನು ಆರಿಸು. ನಗುವನಲ್ಲ.
ಸ್ಮಶಾನದಲ್ಲಿ ಧಗಧಗನೇ ಉರಿಯುವ ಸಾಲು ಸಾಲು ಬೆಂಕಿ ಎಲ್ಲೆಲ್ಲೂ ಕಾಣುತ್ತಿದೆ. ಇನ್ನೂ ಯಾತಕೆ ಬೆಂಕಿ? ನಾಡಿನ ಜನತೆಯ ಮನೆ ಮನದಲ್ಲಿ ಬೆಳಕು ನಂದಿದೆ. ದೀಪ ಹಚ್ಚೋಣ. ಎಲ್ಲೆಡೆ ನೋವು ಆವರಿಸಿದೆ. ಆ ನೋವನ್ನು ಆರಿಸಿ ನಗುವನ್ನು ಅರಳಿಸೋಣ.
ಸರ್ವೇ ಜನಾ: ಸುಖಿನೋ ಭವಂತು.
✍️ರಫೀಕ್ ಮಾಸ್ಟರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.