ದುಬೈ (www.vknews.com) : SKSSF ಕರ್ನಾಟಕ ಯುಎಇ ಹಾಗೂ SKSSF ವಿಖಾಯ ಕರ್ನಾಟಕ ಯುಎಇ ಸಮಿತಿ ವತಿಯಿಂದ “Support India’s Covid Fight” ಇದರ ಭಾಗವಾಗಿ ತಾಯಿನಾಡಿನಲ್ಲಿ ಕೋವಿಡ್ ರೋಗಿಗಳಿಗೆ ಅತ್ಯಗತ್ಯವಾಗಿರುವ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ಗಳನ್ನು ಕಳುಹಿಸಿ ಕೊಡಲು DONATE OXYGEN & SAVE LIVES ಅಭಿಯಾನವನ್ನು ದುಬೈಯಲ್ಲಿ ಆನ್ಲೈನ್ ಮೂಲಕ ಆಯೋಜಿಸಿಲಾಗಿತ್ತು.
ಅಭಿಯಾನವನ್ನು ಯಶಸ್ಸಿಗೊಳಿಸಲು ಅನಿವಾಸಿ ಉದ್ಯಮಿಗಳು, ಉದಾರಿ ಧಾನಿಗಳು, ಸಮಿತಿಯ ಪದಾಧಿಕರಿಗಳು ಉತ್ತಮ ರೀತಿಯಲ್ಲಿ ಸಹಕರಿಸಿದರು. ಜನಾಬ್ ಶೆರೀಫ್ ಕಾವು ಮತ್ತು ಜನಾಬ್ ರಫೀಕ್ ಸುರತ್ಕಲ್ ಅವರು ಅಭಿಯಾನದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. SHIPWAVES DUBAI ಇದರ ಮಾಲಕರಾದ ಜನಾಬ್ ಮುಹಮ್ಮದ್ ಹಾರಿಸ್ ಅವರು ದುಬೈ ಯಿಂದ ಮಂಗಳೂರಿಗೆ ಉಚಿತ ಕಾರ್ಗೊ ವ್ಯವಸ್ಥೆ ಏರ್ಪಡಿಸಿ ಸಹಕರಿಸಿದರು.
ದಿನಾಂಕ 22.5.2021 ಶನಿವಾರ ಬೆಳಿಗ್ಗೆ SKSSF ಕರ್ನಾಟಕ ಯುಎಇ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಅಸ್ಗರ್ ಅಲೀ ತಂಙಲ್ ಅವರ ನೇತೃತ್ವದಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಹುಮಾನ್ಯ ಸುಲೈಮಾನ್ ಮೌಲವಿ ಕಲ್ಲೆಗ ಅವರ ದುವಾದೊಂದಿಗೆ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ಗಳನ್ನು ಕಾರ್ಗೊ ಮೂಲಕ ತಾಯಿನಾಡಿಗೆ ಕಳುಹಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ SKSSF ಕರ್ನಾಟಕ ಯುಎಇ ಟ್ರೆಂಡ್ ಚಯರ್ ಮೇನ್ ನೂರ್ ಮುಹಮ್ಮದ್ ನೀರ್ಕಜೆ, SKSSF ವಿಖಾಯ ಯುಎಇ ಚಯರ್ ಮೇನ್ ಜನಾಬ್ ನವಾಝ್ ಬಿಸಿ ರೋಡ್, ಕಾರ್ಯದರ್ಶಿ ಜನಾಬ್ ನಾಸಿರ್ ಬಪ್ಪಲಿಗೆ, ಕೋಶಾದಿಕಾರಿ ಜನಾಬ್ ಸಿರಾಜ್ ಬಿಸಿ ರೋಡ್, ಕನ್ವೀನರ್ ಜನಾಬ್ ಅಬ್ದುಲ್ ಅಝೀಝ್ ಸೋಂಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶೆರೀಫ್ ಕೊಡಿನೀರು, ಜನಾಬ್ ನಿಝಾಮ್ ತೋಡಾರು, ಶಬೀರ್ ಪರಂಗಿಪೇಟೆ, ಜೌಹರ್ ಉರುಮನೆ ಮೊದಲಾದವರು ಉಪಸ್ತಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.