(www.vknews.in) ಉಪ್ಪಿನಂಗಡಿ ಸರಕಾರಿ ಮಾದರಿ ಶಾಲೆಯ ಆವರಣದಲ್ಲಿ ಕಟ್ಟಡಗಳಿಗೆ ಹಾನಿಯಾಗುವಂತೆ ರಸ್ತೆ ಬದಿಯಲ್ಲಿ ಮರಗಳ ಗೆಲ್ಲುಗಳು ಶಾಲಾ ಹಂಚಿನ ಛಾವಣಿಗೆ ತಾಗಿಕೊಂಡಿದ್ದು ಗಾಳಿ-ಮಳೆಗೆ ಮರದ ಗೆಲ್ಲುಗಳು ಮುರಿದು ಶಾಲಾ ಛಾವಣಿಯ ಹಂಚುಗಳು ತುಂಡಾಗುವ ಸಾದ್ಯತೇ ಇರುವುದರಿಂದ ಹಾಗೂ ಅಪಾಯಕಾರಿ ರೀತಿಯಲ್ಲಿ ಮಾರ್ಗಕ್ಕೆ ವಾಲಿಕೊಂಡಿದ್ದ ಮರದ ಗೆಲ್ಲುಗಳನ್ನು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದ ಉಪ್ಪಿನಂಗಡಿ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡ ಕಂದಾಯ ನಿರೀಕ್ಷಕರಾದ ವಿಜಯ್ ವಿಕ್ರಂ ಸೂಚನೆಯಂತೆ ಮರದ ಗೆಲ್ಲುಗಳನ್ನು ತೆರವುಗೊಳಿಸಿತು
ದಿನಾಂಕ 2/06/2021 ರಂದು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಎಸ್ಡಿಎಂಸಿ ಯು ಶಾಲೆಯ ಸುತ್ತಲೂ ಇರುವ ಅಪಾಯಕಾರಿ ಮರಗಳ ಬಗ್ಗೆ ಹಾಗೂ ಮಳೆಗಾಲ ಶುರು ಆಗುವುದಕ್ಕಿಂತ ಮುಂಚೆಯೇ ತೆರವು ಗೊಳಿಸುವ ಬಗ್ಗೆ ಪುತ್ತೂರು ತಹಶೀಲ್ದಾರ್ ಗೆ ಪತ್ರದ ಮುಖಾಂತರ ಮನವಿ ಸಲ್ಲಿಸಿತ್ತು
ಪತ್ರಕ್ಕೆ ಕೂಡಲೇ ಸ್ಪಂದಿಸಿದ ತಹಶೀಲ್ದಾ ರ್. ಕಂದಾಯ ನಿರೀಕ್ಷಕ ರ ಮುಖಾಂತರ ಪ್ರವಾಹ ರಕ್ಷಣಾ ತಂಡವನ್ನು ಕಳುಹಿಸಿ ಅಪಾಯಕಾರಿ ಮರಗಳ ಕೊಂಬೆಯನ್ನು ತೆರವುಗೊಳಿಸಿದ್ದು ಶಾಲಾ ಶಿಕ್ಷಕ ವೃಂದ ಹಾಗೂ ಎಸ್ಡಿಎಂಸಿ ಯು ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ
ಮರದ ಗೆಲ್ಲುಗಳ ತೆರವು ಕಾರ್ಯದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ, ಎ.ಎಸ್.ಎಲ್.ಜನಾರ್ದನ ಆಚಾರ್ಯ, ಸೂಮನಾಥ್, ವಸಂತ,ಸಮದ್ ,ತಾಲೂಕು ಆಡಳಿತದ ಈಜುಗಾರರಾದ ಸುದರ್ಶನ್, ವಿಶ್ವನಾಥ್ ಶೆಟ್ಟಿಗಾರ್ ಭಾಗವಹಿಸಿದರು ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಮಜೀದ್, ಮೊಯೂದ್ದಿನ್ ಕುಟ್ಟಿ ಲೈನ್ ಮ್ಯಾನ್ ಭೀಮಪ್ಪ ,ಶಾಲಾ ಮುಖ್ಯ ಶಿಕ್ಷಕಿ ದೇವಕಿ.ಎಂ. ಉಪಸ್ಥಿತ ರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.