ಖ ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಕೇಂದ್ರ ಸರ್ಕಾರವು ತನ್ನ ಮೋಸದಾಟವೆಂಬಂತೆ, ಜನ ಸಾಮಾನ್ಯರ ಗಮನಕ್ಕೆ ಬಾರದ ರೀತಿಯಲ್ಲಿ ಚಿಲ್ಲರೆಯಾಗಿ ಪದೇ ಪದೇ ಇಂಧನ ದರವನ್ನು ವೃದ್ಧಿಸುವ ಯೋಜನೆಯ ಮೂಲಕ ಜನಗಳನ್ನು ವಂಚಿಸುತ್ತಿದ್ದು, ಅದರಲ್ಲೂ, ಕೋವಿಡ್ ಎರಡನೇ ಅಲೆಯಲ್ಲಿ, ದೇಶದ ಜನತೆಯು ತತ್ತರಿಸಿ, ನಿಸ್ಸಹಾಯಕರಾಗಿರುವ ಸಂಧರ್ಭವನ್ನು ದುರುಪಯೋಗಿಸಿಕೊಂಡು ತನ್ನ ಸ್ವಾರ್ಥಹಿತ ಸಾಧಿಸುವ ಷಡ್ಯಂತ್ರವನ್ನು ಮತ್ತು ದೇಶವು ಸಾಗುತ್ತಿರುವ ಇಂದಿನ ಪ್ರಸಕ್ತ ಅತಿ ಸಂಧಿಗ್ಧತೆಯನ್ನು ನಿಭಾಯಿಸುವಲ್ಲಿ ಮೋದಿ ಸರಕಾರದ ನಿರಂತರ ವೈಫಲ್ಯತೆಗಳನ್ನು ಖಂಡಿಸಿ ವೆಲ್ಪೇರ್ ಪಾರ್ಟಿಯ ಕಾರ್ಯಕರ್ತರು ಮಂಗಳೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ತೊಕ್ಕೊಟು, ಕುತ್ತಾರ್, ದೇರಳಕಟ್ಟೆ, ಉಳ್ಳಾಲ ಮತ್ತು ತಲಪಾಡಿ ಪ್ರದೇಶದಲ್ಲಿ ಪ್ರತಿಭಟನೆಯನ್ನು ನಡೆಸಿತು.
ಒಂದೆಡೆಯಲ್ಲಿ ಜನರು ಕೊರೊನಾ ಲಾಕ್ಡೌನ್ನಿಂದ ಕಂಗಾಲಾಗಿದ್ದಾರೆ. ಒಪ್ಪೊತ್ತಿನ ಆಹಾರಕ್ಕೂ ಬೇಕಾದ ಕೆಲಸವೂ ಇಲ್ಲದೆ ನಿತ್ಯ ಜೀವನ ನಡೆಸುವುದಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟತೆಯಲ್ಲೂ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತೆರೆಮರೆಯಲ್ಲಿ ಸ್ವಲ್ಪ ಸ್ವಲ್ಪವಾಗಿ ಏರಿಸುತ್ತಲೇ ಬಂದಿದ್ದು, ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದವರು ಟೀಕಿಸಿದರು.
ಇಂದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ , ಕಚ್ಚಾತೈಲದ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ‘ಗಾಯದ ಮೇಲೆ ಬರೆ’ ಎಂಬಂತೆ ಜನಸಾಮಾನ್ಯನ ಮೇಲೆ ಅನಗತ್ಯ ಹೊರೆಯನ್ನು ಹೇರುತ್ತಿದೆ. ಇದೀಗ ಇಂಧನ ಬೆಲೆ ಲೀಟರ್ ಒಂದಕ್ಕೆ ₹ 100 ಗಡಿ ದಾಟಿದ್ದು, ಇದರಿಂದ ಸರಕು ಸಾಗಾಣಿಕೆಗಳ ಮೇಲೆಯೂ ಹೊಡೆತ ಬೀಳುತ್ತಿದೆ. ತನ್ಮೂಲಕ, ನಾಗರಿಕರ ದೈನಂದಿನ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಹೆಚ್ಚಳವಾಗಿದೆಯೆಂದು, ಪ್ರತಿಭಟನಾ ನಿರತರು ತಮ್ಮ ಅಳಲನ್ನು ತೋಡಿಕೊಂಡರು ಮತ್ತು ಇದುವರೆಗೆ ಕೇವಲ ಸುಳ್ಳು ಭರವಸೆಗಳನ್ನು ಮಾತ್ರ ನೀಡಿದ ಮೋದಿ ಸರಕಾರವು, ಯಾವುದೇ ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡದಿರುವುದು ಮಾತ್ರವಲ್ಲದೆ, ಇಲ್ಲಿ ಲಭ್ಯವಿರುವ ಎಮ್. ಆರ್. ಪಿ. ಎಲ್. ನಂತಹ ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕೂಡಾ ಇಲ್ಲಿನ ಪ್ರತಿಭೆಗಳಿಗೆ ಉದ್ಯೋಗವಕಾಶ ನೀಡದೆ, ಹೊರ ರಾಜ್ಯಗಳ ಜನರ ನೇಮಕಾತಿ ಪ್ರಕ್ರಿಯೆ ಎಗ್ಗಿಲ್ಲದೆ ಸಾಗಿದ್ದು, ಇದರಿಂದ ನಮ್ಮ ತುಳುನಾಡ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆಯೆಂದವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ತಲಪಾಡಿ ಮತ್ತು ಕಾರ್ಯದರ್ಶಿ ಮುಹಮ್ಮದ್ ಸೈಫ್ ಇಂದಿನ ಸಾಂಕೇತಿಕ ಪ್ರತಿಭಟನೆಯ ನೇತೃತ್ವವಹಿಸಿದ್ದು, ಕೆಲವಾರು ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.