ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ವ್ಯಾಕ್ಸಿನೇಷನ್ಗೆ ಚಾಲನೆ…
( www.vknews.in )ಹೊಸ ದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್ ನಿರೋಧಕ ಲಸಿಕಾ ಅಭಿಯಾನದ ಸಾರಥ್ಯವನ್ನು ಕೇಂದ್ರ ಸರ್ಕಾರವೇ ವಹಿಸಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಆರೋಗ್ಯ ವಿಚಾರವು ರಾಜ್ಯಗಳ ವಿಷಯವಾದ ಕಾರಣ, ಈ ಹಿಂದೆ ಲಸಿಕಾ ಅಭಿಯಾನದ ಜವಾಬ್ದಾರಿಯನ್ನು ರಾಜ್ಯಗಳಿಗೂ ನೀಡಲಾಗಿತ್ತು. ಆದ್ರೆ, ಹಲವು ರಾಜ್ಯಗಳಿಗೆ ತೊಂದರೆ ಎದುರಾದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವೇ ಈ ಜವಾಬ್ದಾರಿಯನ್ನು ಹೊರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೊರೊನಾ ನಿರ್ವಹಣೆ ವಿಚಾರದಲ್ಲಿ ಭಾರತ ಸರ್ಕಾರವೇ ಎಲ್ಲವನ್ನೂ ನಿರ್ಧರಿಸುತ್ತಿದೆ ಎಂದು ಈ ಹಿಂದೆ ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಹೀಗಾಗಿ, ಕೊರೊನಾ ಲಸಿಕೆ , ಸ್ಥಳೀಯ ಮಟ್ಟದಲ್ಲಿ ಕರ್ಫ್ಯೂ, ಕಂಟೈನ್ಮೆಂಟ್ ಝೋನ್ ಸೇರಿದಂತೆ ಹಲವು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯಕ್ಕೆ ನೀಡಲಾಗಿತ್ತು ಎಂದ ಪ್ರಧಾನಿ ಮೋದಿ, ಇದೀಗ ಲಸಿಕಾ ಅಭಿಯಾನದ ಸಂಪೂರ್ಣ ಹೊಣೆ ಭಾರತ ಸರ್ಕಾರದ್ದು ಎಂದು ಘೋಷಿಸಿದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆಲ್ಲುತ್ತೇವೆ ಎಂದ ಪ್ರಧಾನಿ ಮೋದಿ, ಕೊರೊನಾ ಲಸಿಕೆ ಕುರಿತಾಗಿ ಸುಳ್ಳು ವದಂತಿ ಹರಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ನಮ್ಮ ಲಸಿಕಾ ಅಭಿಯಾನವನ್ನು ಹಾಳುಗೆಡವುವ ತಂತ್ರ ನಡೆಯಿತು ಎಂದು ಬೇಸರಗೊಂಡರು. ದೇಶದ ಜನರು ತಮ್ಮ ಸಮುದಾಯದ ನಡುವೆ ಲಸಿಕೆಯ ಕುರಿತಾಗಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.