ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯು ಪ್ರಸಕ್ತ ಸನ್ನಿವೇಶದಲ್ಲಿ ಸಾರ್ವಜನಿಕರೆಲ್ಲರ ನೆರವಿಗಾಗಿ ಪ್ರತಿ ಗ್ರಾಮದಲ್ಲಿ ತನ್ನ ಸೇವಾ ತಂಡಗಳನ್ನು ಸನ್ನದ್ಧಗೊಳಿಸುವ ಯೋಜನೆಯನ್ನು ಹೊಂದಿದ್ದು, ಇದನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ, ತನ್ನ ಪದಾಧಿಕಾರಿಗಳ ನಿಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು ಅದರಂತೆ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿನ ಎಡಪದವು ಗ್ರಾಮ ಪಂಚಾಯತ್ ವಲಯದಲ್ಲಿ ವೆಲ್ಪೇರ್ ಪಕ್ಷದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ.
ಪಂಚಾಯತ್ ಮಟ್ಟದಲ್ಲಿ ಜನಸೇವೆ ಮಾಡುವ ನಿಟ್ಟಿನಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷರಾದ ಸಲ್ಮಾನ್ ಇಮ್ತಿಯಾಝ್ ರ ಅಧ್ಯಕ್ಷತೆಯಲ್ಲಿ ಝೂಮ್ ಮೂಲಕ ಸಭೆ ನಡೆಸಲಾಗಿ, ವೆಲ್ಪೇರ್ ಪಕ್ಷದ ಗುರುಪುರ ವಲಯದಲ್ಲಿನ ಸ್ಥಳೀಯ ವರ್ತುಲವನ್ನು ಬರ್ಕಾಸ್ತುಗೊಳಿಸಿ, ಎಡಪದವು ಮತ್ತು ಕುಪ್ಪೆಪದವು ವಲಯದಲ್ಲಿ ಪಕ್ಷದ ಘಟಕಗಳನ್ನು ರಚಿಸಲಾಯಿತು. ಹಾಗೂ ಇದರ ಎಡಪದವು ಕೇಂದ್ರಿತವಾಗಿರುವ ಅಧ್ಯಕ್ಷರಾಗಿ ಮುನೀರ್ ಪದ್ರೆಂಗಿ ಮತ್ತು ಕುಪ್ಪೆಪದವು ಘಟಕಾಧ್ಯಕ್ಷರಾಗಿ ಮಯ್ಯದ್ಧಿ ಶರೀಫ್ (ಹಮ್ದ ಶಾಮಿಯನ)ರವರನ್ನು ಅಲ್ಲದೆ ಇವೆರಡು ವಲಯದ ಸಂಚಾಲಕರಾಗಿ ಅಶ್ರಪ್ ಬಾಳೆಮಾರ್ ರವರನ್ನು, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷರಾಗಿರುವ ಅಡ್ವೋಕೇಟ್ ಸರ್ಪರಾಜ್ ನಿರ್ದೇಶನದಂತೆ ನೇಮಕ ಮಾಡಲಾಯಿತು. ಹಾಗೂ ಮಂಗಳೂರು ಉತ್ತರ ವಲಯದ ‘ಟೀಮ್ ವೆಲ್ಪೇರ್’ ತಂಡವನ್ನು ರಚಿಸಲಾಯಿತು. ಇನ್ನು ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ, ಟೀಮ್ ವೆಲ್ಪೇರ್ ಹೆಸರಿನಲ್ಲಿನ ಸೇವಾ ತಂಡವನ್ನು ನಿಯೋಜಿಸುವಲ್ಲಿ ಕ್ರಮಕೈಗೊಳ್ಳುವುದಾಗಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.