ವರ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಇಡೀ ವಿಶ್ವದಾದ್ಯಂತ ಆವರಿಸಿರುವ ಮಹಾಮಾರಿ ಕರೋನಾ ಎಲ್ಲಾರನ್ನು ದಂಗುಬಡಿಸಿದೆ. ಈ ನಿಟ್ಟಿನಲ್ಲಿ ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಮುಖಂಡರಾದ್ ವರ್ತೂರು ಸುರೇಶ್ ರವರು ಹಸಿದ ಹೊಟ್ಟೆಗಳಿಗೆ ಪ್ರತಿದಿನ ಅನ್ನ ನೀಡಿ ಹಸಿವು ನಿಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ವರ್ತೂರು ಸುರೇಶ್ ಕರೋನಾ ವೈರಸ್ ಇಂದು ಎಲ್ಲೆಡೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಆವರಿಸಿ ಜೀವ ಹಿಂಡುತ್ತಿರುವಾಗ ನಮ್ಮ ಕೈಯಲ್ಲಾಗುವ ಸೇವೆಗಳನ್ನು ಬಡವರಿಗೆ, ಶೋಷಿತರಿಗೆ, ಹಸಿದವರಿಗೆ, ಪೌರ ಕಾರ್ಮಿಕರಿಗೆ, ನಿರಾಶ್ರಿತರಿಗೆ ಅನ್ನ ನೀಡುವ ಕಾರ್ಯವನ್ನು ಪ್ರತಿದಿನ ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಇಂದು ವಿಧಾನ ಪರಿಷತ್ ಸದಸ್ಯರಾದ ನಾರಾಯಣಸ್ವಾಮಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದರು ಉದಯ್ ಕುಮಾರ್ ರವರ ನಾಯಕತ್ವದಲ್ಲಿ ಎಲ್ಲೆಡೆ ಊಟ ನೀಡುವ ಕಾರ್ಯ ಮಾಡಿದ್ದೇವೆ..ಈ ಕಾಳಜಿ ಎಲ್ಲಾರಿಗೂ ಇರಲಿ ಎಂದರು. ಹಸಿದವರಿಗೆ ಅನ್ನ ನೀಡುವ ಕಾರ್ಯಕ್ಕೆ ಸ್ಪಂದಿಸಿದ ಎಲ್ಲಾರಿಗೂ ಅಭಿನಂದನೆ ಸಲ್ಲಿಸಿದರು.
ಈ ಒಂದು ಕಾರ್ಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಕರೋನಾ ಉಸ್ತುವಾರಿ ಯಾದಂತ ಎಂಎಲ್ ಸಿ ನಾರಾಯಣಸ್ವಾಮಿ, ಬಿಬಿಎಂಪಿ ಮಾಜಿ ಸದಸ್ಯರಾದ ಉದಯಕುಮಾರ್, ಜಯರಾಮ್ ರೆಡ್ಡಿ,ವಿಟಿವಿ ಬಾಬಣ್ಣ, ನಲ್ಲೂರಳ್ಳಿ ನಾಗೇಶ್,ಸತೀಶ್ ಕುಮಾರ್, ರಾಮಕೃಷ್ಣಪ್ಪ, ಮಹಿಳಾ ಬ್ಲಾಕ್ ಅಧ್ಯಕ್ಷರಾದ ವನಜರೆಡ್ಡಿ ಹಾಗೂ ನಮ್ಮ ಕಾಂಗ್ರೆಸ್ ಎಲ್ಲ ಹಿರಿಯ ಮುಖಂಡರೂ ಹಾಗು ಯೂತ್ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.