(ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿಗಳಲ್ಲಿ ಒತ್ತಾಯಿಸುವುದೆನೆಂದರೆ ಇತ್ತೀಚಿಗೆ ಕೆನಡಾ ಮೂಲದ ಅಮೆಜಾನ್ ಎಂಬ ದೈತ್ಯ ಆನ್ ಲೈನ್ ವ್ಯವಹಾರಿಕ ಕಂಪನಿಯು ಸಮಸ್ತ ಕನ್ನಡಿಗರ ಬಾವುಟದ ಸಂಖ್ಯೆತವಾದ ಹರಿಸಿನ ಮತ್ತು ಕೆಂಪು ಬಣ್ಣವನ್ನು ಬಳಸಿ ಕೆನಡಾದಲ್ಲಿ ಹೆಣ್ಣು ಮಕ್ಕಳು ಬಳಸುವ ಒಳ ಉಡುಪಿನಲ್ಲಿ ಕನ್ನಡ ಬಾವುಟದ ಆಕೃತಿಯಲ್ಲಿ ಉತ್ಪಾದಿಸುವುದರೊಂದಿಗೆ ಸಮಗ್ರ ಆರುವರೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಭಾರತಕ್ಕೆ ಬಹುರಾಷ್ಟ್ರೀಯ ಬಂಡವಾಳಶಾಯಿ ಕಂಪೆನಿಗಳು ಉದ್ಯೋಗಕ್ಕೆಂದು ಬಂದು ಕ್ರಮೇಣ ನಾಡದ್ರೋಹಿ ಹಾಗೂ ದೇಶದ್ರೋಹಿ ಕೆಲಸಕ್ಕೆ ಮುಂದಾಗುತ್ತವೆ.ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರು ಐ ಪಿ ಎಲ್ ನಲ್ಲಿ ಕಾಲಿಗೆ ಧರಿಸುವ ಶೂ ಗಳಿಗೆ ಕನ್ನಡ ಬಾವುಟದ ಬಣ್ಣ ಬಳಸಿ ಸಮಸ್ತ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದರು.ಅದಾದ ಬಳಿಕ ಗೂಗಲ್ ನಲ್ಲಿ ಕನ್ನಡಿಗರನ್ನು ಕೆಣಕುವ ಮೂಲಕ ಕನ್ನಡಿಗರರಲ್ಲಿ ಕ್ಷಮೆ ಯಾಚಿಸಿದ್ದರು. ಮತ್ತೇ ಇದೀಗ ಅಮೆಜಾನ್ ಎಂಬ ಆನ್ ಲೈನ್ ವ್ಯವಹಾರಿಕ ಕಂಪನಿಯು ಸಮಸ್ತ ಕರ್ನಾಟಕದ ಹೆಣ್ಣುಮಕ್ಕಳು ಗೌರವಿಸಿ ಪೂಜಿಸುವ ಹರಿಸಿನ ಕುಂಕುಮ ವರ್ಣವನ್ನು ಬಳಸಿದ್ದು, ಭಾರತೀಯ ಹೆಣ್ಣುಮಕ್ಕಳ ಮುತೈದತನವನ್ನು ಸೂಚಿಸುವ ಹಳದಿ ಮತ್ತು ಕೆಂಪು ಬಣ್ಣ ಬಳಸಿ ಕೆನಡಾದಲ್ಲಿ ಹೆಣ್ಣು ಮಕ್ಕಳ ಒಳ ಉಡುಪುಗಳನ್ನು ತಯಾರಿಸಿ ಮಾರಾಟಕ್ಕಿಟ್ಟಿರುವ ಅಮೆಜಾನ್ ಕಂಪನಿ ತನ್ನ ಸಣ್ಣತನವನ್ನು ಪ್ರದರ್ಶಿಸಿದೆ. ಸರ್ಕಾರದ ಲಾಂಛನವನ್ನು ಒಳ ಉಡುಪುಗಳಿಗೆ ಅಂಟಿಸಿ ನಾಡದ್ರೋಹಿ ಹಾಗೂ ದೇಶದ್ರೋಹಿ ಕೃತ್ಯಕ್ಕೆ ಕೈ ಹಾಕಿದೆ ಇದನ್ನು ಸಮಗ್ರ ಕರ್ನಾಟಕದ ಸಮಸ್ತ ಕನ್ನಡಿಗರು ತೀವ್ರವಾಗಿ ಖಂಡಿಸುತ್ತಾರೆ.
ಕರ್ನಾಟಕದಲ್ಲಿ ಅಮೆಜಾನ್ ಕಂಪೆನಿಯ ವ್ಯವಹಾರಗಳನ್ನು ನಡೆಯದ ಹಾಗೆ ಕರವೇ ಕಾರ್ಯಕರ್ತರು ರಾಜ್ಯವ್ಯಾಪ್ತಿ ಇರುವ ಅಮೆಜಾನ್ ಕಂಪೆನಿಯ ಮಳಿಗೆಗಳಿಗೆ ಮುತ್ತಿಗೆ ಹಾಕುವುದರಿಂದ ಕಂಪನಿಯ ವಿರುದ್ಧ ಪ್ರತಿಭಟಿಸಿ ವ್ಯವಹಾರಿಕ ವಹಿವಾಟಿಗೆಅಡ್ಡಿಪಡಿಸಲಾಗುವುದುಈ ಕೂಡಲೆ ಅಮೆಜಾನ್ ಕಂಪನಿಯು ಸಮಸ್ತ ಕರ್ನಾಟಕದ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಕರ್ನಾಟಕದಲ್ಲಿ ವ್ಯವಹಾರ ವಹಿವಾಟುಗಳನ್ನು ಸ್ಥಗಿತಗೋಳಿಸಬೇಕೆಂದು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟ ಜಿಲ್ಲಾಘಟಕ ಒತ್ತಾಯಪಡಿಸುತ್ತದೆ.
ರಾಜ್ಯ ಸರ್ಕಾರ ಇದಕ್ಕೆ ಸಂಬಂಧಪಟ್ಟಂತೆ ಅಮೆಜಾನ್ ಕಂಪೆನಿಯ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಂಡು ಮುಂದಿನ ತನಿಖೆಗೆ ಆದೇಶಿಸಬೇಕೆಂದು ಕರವೇ ಒತ್ತಾಯ ಪಡಿಸುತ್ತದೆ..
ಗೌರವಾದರಗಳೊಂದಿಗೆ ನಿಮ್ಮ ವಿಶ್ವಾಸಿಕ
ಬಿ.ಎಂ.ಪಾಟೀಲ ಜಿಲ್ಲಾಧ್ಯಕ್ಷರು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟ ಜಿಲ್ಲಾಘಟಕ
– ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.