(www.vknews.com) : ಟೀಂ- ಬಿ ಹ್ಯೂಮನ್ ಕಳೆದ ಕೆಲವು ದಿನದ ಹಿಂದೆ ಲಾಕ್ ಡೌನ್ ನಲ್ಲಿ ಸಿಲುಕಿ ಊರಿಗೆ ಮರಳಲು ಸಾಧ್ಯವಾಗದೆ ಮಂಗಳೂರಿನಲ್ಲಿ ಇರುವ ವ್ಯಕ್ತಿ ಅಥವಾ ಸಂಸಾರಕ್ಕೆ ನೆರವಾಗಲು ಊರಿಗೆ ತೆರಳಲು ಪ್ರಯಾಣ ವ್ಯವಸ್ಥೆ ಕಲ್ಪಿಸುವ ಘೋಷಣೆ ಮಾಡಿತ್ತು. ಇದನ್ನರಿತು ಕೊಲ್ಕತ್ತಾದಿಂದ ಬಂದು ನಗರದಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದ ಮಿಶ್ರಾ ಮತ್ತು ಅವರ ಪತ್ನಿಗೆ ಇದೀಗ ಟೀಂ – ಬಿ ಹ್ಯೂಮನ್ ತಂಡವು ನೆರವಾಗಿದೆ. ಕೆಲಸ ನೀಮಿತ್ತ ಬಂದು, ಇಲ್ಲಿ ಯಾವುದೇ ಕೆಲಸ ಸಿಗದೇ, ಆಹಾರಕ್ಕೂ ಪರದಾಟ ನಡೆಸುತ್ತಿದ್ದ ಮಿಶ್ರಾರವರ ಸಂಸಾರಕ್ಕೆ ಕೊಲ್ಕತ್ತಾ ತೆರಳಲು ರೈಲು ಟಿಕೇಟ್ ಮತ್ತು ಪ್ರಯಾಣಕ್ಕೆ ಬೇಕಾದ ವೆಚ್ಚವನ್ನು ನೀಡಿ ಟೀಂ ಬಿ ಹ್ಯೂಮನ್ ಸಹಕಕರಿಸಿದೆ.
ಮಿಶ್ರಾ ಕೊಲ್ಕತ್ತಾಕ್ಕೆ ಹೋಗಲು ಪ್ರಯಾಣ ಹಣವೂ ಇಲ್ಲದೆ ಕಂಗಾಲಾಗಿದ್ದ ಸಂದರ್ಭದಲ್ಲಿ ಟೀಂ ಬಿ ಹ್ಯೂಮನ್ ತಂಡದ ನೆರವು ಅವರಿಗೆ ದೊಡ್ಡ ಉಪಕಾರವಾಯಿತು ಎಂದು ಹೇಳಿದರು. ಲಾಕ್ ಡೌನ್ ನಾಗರಿಕರ ಬದುಕನ್ನು ಎಷ್ಟು ಕಾಡುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಮಿಶ್ರಾರವರು ಪತ್ನಿಯ ಜೊತೆ ಈಗ ಬಹಳ ಖುಷಿಯಿಂದಲೇ ಊರಿಗೆ ತೆರಳಲು ರೈಲು ಹತ್ತಿದ್ದಾರೆ. ಅವರ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸೋಣ.
ಯುವಕರಲ್ಲಿ ಸಾಮಾಜಿಕ ಕಾಳಜಿ ಮತ್ತು ಸೇವಾ ಮನೋಭಾವ ಉತ್ತೇಜಿಸುವ ಉದ್ದೇಶದಿಂದ ಸಂಸ್ಥೆಯು ಈ ಅಭಿಯಾಕ್ಕೆ ಯುವಕರನ್ನು ಭಾಗವಹಿಸುವಂತೆ ಪ್ರೆರೇಪಿಸಿದೆ. ಸಮಾಜದ ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿ ತಿಳಿದು, ಅವರಿಗೆ ಸ್ಪಂದಿಸುವ ಮನೋಭಾವ ಬೆಳೆಸಲು ಇದು ಸಹಕಾರಿಯಾಗಲಿದೆ ಎಂದು ಆಸಿಫ್ ಡೀಲ್ಸ್ ಹೇಳುತ್ತಾರೆ. ಈ ಸಂದರ್ಭ, ಯುವಕರಾದ ಅಲ್ತಾಫ್, ಸಾದಿಕ್, ಮಿಷಾಬ್, ಶಬೀರ್, ರಿಯಾನ್, ಅಹ್ನಾಪ್ ಡೀಲ್ ಯುವಕರ ತಂಡದ ಪ್ರಯತ್ನಯವನ್ನು ಪ್ರಶಂಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.