ಶ್ರೀನಿವಾಸಪುರ(www.vknews.com):– ಜನರು ಸ್ವಯಂ ಪ್ರೇರಣೆಯಿಂದ ಕೋವಿಡ್ ವಿರುದ್ಧ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ ಎಂ.ಸಿ.ವಿಜಯ ಹೇಳಿದರು. ಪಟ್ಟಣದ ರಾಮಕೃಷ್ಣ ಬಡಾವಣೆಯಲ್ಲಿ ಪುರಸಭೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಬುಧವಾರ ಸ್ಥಾಪಿಸಲಾದ ಲಸಿಕಾ ಕೇಂದ್ರದಲ್ಲಿ ಕೋವಿಡ್ ವಿರುದ್ಧ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು , ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಸಲಹೆಯಂತೆ , ಪಟ್ಟಣದ ಪ್ರತಿ ವಾರ್ಡನಲು ಕೊವಿಸ್ ವಿರುದ್ಧ ಲಸಿಕೆ ನೀಡಲಾಗುವುದು ರಾಮಕೃಷ್ಣ ಬಡಾವಣೆ ಹಾಗೂ ಕಟ್ಟಿ ಕೆಳಗಿನ ಪಾಳ್ಯದ ನಾಗರಿಕರಿಗೆ ಕೋವಿಡ್ ವಿರುದ್ಧ ಲಸಿಕೆ ನೀಡಲಾಯಿತು. ನಾಗರಿಕರು ಕೊವಿಕ್ ನಿಯಮ ಪಾಲಿ , ಸರತಿಯ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಂಡರು. ಪುರಸಭಾಧ್ಯಕ್ಷ ಎಂ.ಎನ್.ಲಲಿತಾ ಶ್ರೀನಿವಾಸ್ , ಉಪಾಧ್ಯಕ್ತಿ ಆಯೆಷಾ ನಯಾಜ್ , ಮುಖ್ಯಾಧಿಕಾರಿ ಸಿ.ಶೇಖರ್ ರೆಡ್ಡಿ , ಸದಸ್ಯರಾದ ಬಿ.ವೆಂಕಟರೆಡ್ಡಿ , ಶಾಂತಮ್ಮ ಕೃದ್ದೇಗೌಡ , ಶಿವ , ರಾಜೇಶ್ವರಿ , ಕಂದಾಯ ನಿರೀಕ್ಷತ ಶಂಕರ್ , ನಾಗರಾಜ್ , ಸಿವು , ಗೋವಿಂದಮ್ಮ , ನಾಗೇಶ್ ಇದ್ದರು. ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.