ಶ್ರೀನಿವಾಸಮರ (www.vknews.com):- ಎಲ್ಲ ಜನರೂ ಸಹಕರಿಸಿದಾಗ ಮಾತ್ರ ಈ ಕೋವಿಡ್ ಮಹಾ ಮಾರಿಯನ್ನು ಮಣಿಸಲು ಸಾಧ್ಯವಾಗುತ್ತದೆ ಎಂದು ಪುರಸಭೆಯ ಸ್ವಚ್ಛತಾ ರಾಯಭಾರಿ ಟಿ.ಎಸ್.ಮಾಯಾ ಬಾಲಚಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಲಾದ ಬೆಡ್ ಶೀಟ್ ಹಾಗೂ ದಿಂಬು ಚೀಲಗಳನ್ನು ತಾಲ್ಲೂಕು ವೈದ್ಯಾಧಿಕಾರಿ ಡಾ ಎಂ.ಸಿ.ವಿಜಯ ಅವರಿಗೆ ಹಸ್ತಾಂತರಿಸಿ , ಮಾತನಾಡಿ , ಕೊರೊನಾ ಸಂಕಷ್ಟಕ್ಕೆ ಸ್ಪಂದಿಸಿ ಸಹಾಯ ಹಸ್ತ ನೀಡುತ್ತಿರುವ ದಾನಿಗಳ ಹೃದಯವಂತಿಕೆ ಸ್ತುತ್ಯಾರ್ಹ ಎಂದು ಹೇಳಿದರು .
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಘಟಕದ ನಿರ್ದೇಶಕ ಸುರೇಶ್ ಗೌಡ ಮಾತನಾಡಿ , ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ ಅವರು ಜಿಲ್ಲೆಯ ಸರ್ಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ನೀಡಲು ೨ ಸಾವಿರ ಬೆಡ್ ಶೀಟ್ ಹಾಗೂ ೨ ಸಾವಿರ ದಿಂಬು ಕವರ್ ನೀಡಿದ್ದಾರೆ.
ಪಟ್ಟಣದ ಹಾಗೂ ಹೊರವಲಯದಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿನ ಕೋಪಡ್ ಆಸತೆಗಳಿಗೆ ತಲಾ ೨೦೦ ರಂತೆ ೪೦೦ ಬೆಡ್ ಶೀಟ್ ಹಾಗೂ ೪೦೦ ದಿಂಬು ಕವರ್ ನೀಡಲಾಗಿದೆ ಎಂದು ಹೇಳಿದರು . ತಾಲ್ಲೂಕು ವೈದ್ಯಾಧಿಕಾರಿ ಡಾ ಎಂ.ಸಿ.ವಿಜಯ್ಯ ಮಾತನಾಡಿ , ಸರ್ಕಾರಿ ಆಸ್ಪತ್ರೆ ರೋಗಿಗಳ ಅದರಲ್ಲೂ ಕೋವಿಡ್ ಸೋಂಕಿತರ ನೆರವಿಗೆ ದಾನಿಗಳು ಧಾವಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ . ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಬಡವರ ಭಾಳಿಗೆ ಬೆಳಕಾಗಿದ್ದಾರೆ. ಅವರು ರೋಗಿಗಳಿಗಾಗಿ ನೀಡಿರುವ ಕೊಡುಗೆಯನ್ನು ಕೃತಜ್ಞತೆಯಿಂದ ಸ್ವೀಕರಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ನಾಗವೇಣಿ ರೆಡ್ಡಿ , ಸಮಾಜ ಸೇವಕ ರೋಟರು ಚಂದ್ರಶೇಖರ್ , ಮುಖಂಡರಾದ್ಧ ಮುನಿಶಾಮಿರೆಡ್ಡಿ , ವಾಸು , ಜ್ಯೋತಿ , ಧರ್ಶನ್ , ಡಾ . ದಿವಾಕರ್ , ಡಾ . ನಿರಂಜನ್ , ಲೀಡಿಯಾ , ಮಹಮದ್ ಅಲಿ , ನಾಗರಾಜ್ ಮತ್ತಿತರರಿದ್ದರು. ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಮರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.