ಕೋಲಾರ(www.vknews.com):- ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರಗಳ ಆಡಳಿತದಿಂದಾಗಿ ಜನರು ನಲುಗಿ ಹೋಗಿದ್ದಾರೆ . ಮೋದಿ ಹೆಸರಿನ ಅನೇಕರು ಈಗಾಗಲೇ ಲೂಟಿ ಮಾಡಿ ದೇಶ ಬಿಟ್ಟಿದ್ದು , ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಯೂ ದೇಶ ಬಿಟ್ಟು ಹೋಗಲಿದ್ದಾರೆ ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಲೇವಡಿ ಮಾಡಿದರು. ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಅಲ್ಪಸಂಖ್ಯಾತರ ಘಟಕದಿಂದ ಆಯೋಜಿಸಿದ್ದ ಫುಡ್ ಡಿಸ್ಸಿಷನ್ ಡೇ ಅಂಗವಾಗಿ ಹಮ್ಮಿಕೊಂಡಿದ್ದ ಆಹಾರ ಪೊಟ್ಟಣ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಾ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ ೭ ಕೆಜಿ ಅಕ್ಕಿ ನೀಡುತ್ತಿದ್ದರು , ಆದರೆ ಅದು ಇಂದು ಅದು ೨ ಕೆಜಿಗೆ ಇಳಿಕೆಯಾಗಿದೆ.ಇದರೊಟ್ಟಿಗೆ ಪೆಟ್ರೋಲ್- ಡೀಸಲ್ಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಕ್ರಮೇಣ ಗಗನಕ್ಕೇರಿದ್ದು , ನರೇಂದ್ರ ಮೋದಿ ಜನರಿಗೆ ಸಹಾಯವಾಗುವ ಯಾವ ಕೆಲಸ ಮಾಡುತ್ತಿಲ್ಲ. ಅಚ್ಛೇ ದಿನ್ ಬದಲಿಗೆ ಜನರ ಮೇಲೆ ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು . ಕೊರೊನಾ ಕಂಟಕದ ಬಗ್ಗೆ ರಾಹುಲ್ಗಾಂಧಿ ಎಚ್ಚರಿಸಿ ಹೇಳಿದಾಗ ಅವರನ್ನು ನೋಡಿ ಅನೇಕರು ನಕ್ಕರು ಆ ಬಳಿಕ ಅನುಭವಿಸಿದ ಕಷ್ಟ ಎಲ್ಲರೂ ನೋಡಿದ್ದೇವೆ . ಲಸಿಕೆ ವಿಚಾರದಲ್ಲೂ ತಾರತಮ್ಯ ಮಾಡಿದ ಹಿನ್ನಲೆಯಲ್ಲಿ ನ್ಯಾಯಾಲಯವೂ ಕೇಂದ್ರ ಹಾಗೂ ಬಿಜೆಪಿ ಸರಕಾರಕ್ಕೆ ಛೀಮಾರಿ ಹಾಕಿದೆ . ಇನ್ನು ಪಿಎಂ ಕೇರ್ ಫಂಡ್ ಅನ್ನು ಆರಂಭಿಸಿದರು ಅದರ ಲೆಕ್ಕ ಕೇಳಿದರೆ ಕೊಡುವವರೇ ಇಲ್ಲ . ಕಣ್ಮರೆಸುವ ತಂತ್ರಕ್ಕೆ ಮಾತ್ರ ಸಿಎಂ ಯಡಿಯೂರಪ್ಪ ಪ್ಯಾಕೇಜ್ಗಳನ್ನು ಘೋಷಿಸಿದ್ದಾರೆ . ಆದರೆ , ಆಟೋ ಚಾಲಕರಿಗೆ ಬ್ಯಾಡ್ಸ್ ಕೇಳುತ್ತಾರೆ , ಕಟ್ಟಡ ಕಾರ್ಮಿಕರು ಆನ್ಲೈನ್ನಲ್ಲಿ ಅಪ್ಲಿಕೇಶನ್ ಹಾಕಬೇಕು ಎಂದು ಹೇಳುತ್ತಾರೆ , ಇವೆಲ್ಲವೂ ಗಿಮಿಕ್ ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದರು , ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು , ಮುಖಂಡರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಇನ್ನಷ್ಟು ದಿನಸಿ ಕಿಟ್ ಗಳನ್ನು ನೀಡಲು ಕ್ರಮಕೈಗೊಳ್ಳುತ್ತೇವೆ . ಈಗಾಗಲೇ ಆಂಬ್ಯುಲೆನ್ಸ್ ನೀಡಿದ್ದು ಉತ್ತಮವಾಗಿ ಕೆಲಸ ಮಾಡುತ್ತಿವೆ . ಮೆಡಿಕಲ್ ಕಿಟ್ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು , ಜಿಲ್ಲಾ ಅಲ್ಪಸಂಖ್ಯಾತರ ಸಮಿತಿಯಿಂದ ಅನ್ನದಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು .
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಮಾತನಾಡಿ , ಬಿಜೆಪಿಯವರು ಹಣ ಮಾಡುವುದರಲ್ಲಿ ನಿರತರಾಗಿದ್ದಾರೆ ಹೊರತು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ . ಆದರೆ ನಮ್ಮ ಕಾಂಗ್ರೆಸ್ ವತಿಯಿಂದ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ . ಬಿಜೆಪಿಯವರು ದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ . ಜನರಿಗೆ ಅರ್ಥ ಆಗುತ್ತಿಲ್ಲ . ಮುಂದಿನ ದಿನಗಳಲ್ಲಿ ಎಲ್ಲವೂ ಅರಿವಾಗುತ್ತದೆ . ನ್ಯಾಯಾಲಗಳು ಸಹ ಛೀಮಾರಿ ಹಾಕುತ್ತಿದ್ದು , ಜನರು ಎಚ್ಚೆತ್ತು ತಕ್ಕಪಾಠ ಕಲಿಸಬೇಕು ಎಂದ ಅವರು , ದಿನಸಿ ಊಟ ನೀಡುವ ವಿಚಾರದಲ್ಲಿ ಪಕ್ಷಬೇಧ ಮರೆತು ನೀಡಬೇಕು. ಕಾಂಗ್ರೆಸ್ ಒಂದು ಜಾತಿಗೆ ಸೀಮಿತವಲ್ಲ . ಹಾಗಾಗಿ ಎಲ್ಲರಿಗೂ ಸಹಾಯ ಮಾಡುತ್ತಿದೆ ಎಂದರು .
ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಪ್ಯಾರೇಜಾನ್ , ಮಾತನಾಡಿ , ಕೆಪಿಸಿಸಿ ಮೈನಾರಿಟಿ ವಿಭಾಗದಿಂದ ಜೂನ್ ೯ ರಂದು ಫುಡ್ ಡಿಸ್ಟ್ರಿಬ್ಯೂಷನ್ ಡೇ ಎಂದು ಆಚರಣೆ ಮಾಡುತ್ತಿದ್ದು , ಅದರ ಅದರ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಮೂಲಕ ಸುಮಾರು ೫೦೦ ಮಂದಿಗೆ ಆಗುವಷ್ಟು ಊಟದ ವ್ಯವಸ್ಥೆಯನ್ನು ಮಾಡಿದ್ದು , ಅಲ್ಪಸಂಖ್ಯಾತರ ವಿಭಾಗದಲ್ಲಿ ತಮ್ಮೊಟ್ಟಿಗೆ ಕೈ ಜೋಡಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು . ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ , ಅಲ್ಪಸಂಖ್ಯಾತರ ಮುಖಂಡ ವಿಕಾಲ್ ಮಾತನಾಡಿದರು . ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಲತೀಫ್ , ಜನಾರ್ಧನ್ , ಜೆ.ಕೆ.ಜಯರಾಂ , ವೆಂಕಟಪತಪ , ತಬ್ರೇಜ್ , ಕೃಪೇಗೌಡ ಮತ್ತಿತರರಿದ್ದರು. ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.