(ವಿಶ್ವ ಕನ್ನಡಿಗ ನ್ಯೂಸ್) : ಸಾವಿರಾರು ಜನರಿಗೆ ತುರ್ತು ರಕ್ತದ ಅಗತ್ಯತೆಯನ್ನು ಪೂರೈಸುವ ಮೂಲಕ ಜನರ ಜೀವ ಉಳಿಸುತ್ತಿರುವ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಗೆ ಕೋಲಾರ ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಪ್ರಾಧ್ಯಪಕರು, ಅರಳೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ವನಿತಾ ಅರವಿಂದ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು VKF ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ VKF ನೂತನ ಕೋಲಾರ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ವನಿತಾ ಅರವಿಂದ್ ರವರು “ಸದಾ ಸಮಾಜಸೇವೆಯ ಮೂಲಕ ಹಲವು ಜನರ ಜೀವಗಳ ಉಳಿಸುವ ಕಾರ್ಯ ಮಾಡುತ್ತಿರುವ ರಾಜ್ಯದ ಮೊದಲ ಫೌಂಡೇಶನ್ ಆಗಿ, ರಕ್ತದಾನ, ನೇತ್ರದಾನ ಹಾಗೂ ಸಮಾಜಸೇವೆ ಮೂಲಕ ರಾಜ್ಯಕ್ಕೆ ಪರಿಚಿತವಿರುವ ಈ ಮಹತ್ತರ ಸಂಸ್ಥೆಗೆ ನನನ್ನು ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಸಂಸ್ಥಾಪಕ ಅಧ್ಯಕ್ಷರು, ಹಾಗೂ ರಾಜ್ಯ ಅಧ್ಯಕ್ಷರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ… ಹಾಗೇ ನನ್ನ ಪ್ರಮಾಣಿಕ ಸೇವೆಯನ್ನು ನಿರಂತರವಾಗಿ ಫೌಂಡೇಶನ್ ಅಭಿವೃದ್ದಿಗೆ, ಸಾರ್ವಜನಿಕರ ಒಳಿತಿಗೆ ಶ್ರಮಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ VKF ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ರವರು ಮಾತನಾಡಿ “ಸಾವಿರಾರು ವಿದ್ಯಾರ್ಥಿಗಳ ಒಡನಾಟ, ಸಮಾಜದ ಬಗ್ಗೆ ಕಳಕಳಿ, ಸೇವೆಯ ಬಗ್ಗೆ ಆಸಕ್ತಿ, ಇವುಗಳನ್ನು ಪರಿಗಣಿಸಿ ಶ್ರೀಮತಿ ವನಿತಾ ಅರವಿಂದ್ ರವರನ್ನು ಕೋಲಾರ VKF ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಇವರು ಈ ಸಮಯದಿಂದ ಉತ್ತಮ ಸೇವೆ” ಮಾಡಲಿ ಎಂದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.