(ವಿಶ್ವ ಕನ್ನಡಿಗ ನ್ಯೂಸ್) ಮಾಲೂರು ತಾಲೂಕಿನ ಪುಣ್ಯಕ್ಷೇತ್ರ ಚಿಕ್ಕತಿರುಪತಿಯಲ್ಲಿ ಯುವ ನಾಯಕರಾದ ಸಿ.ಜಿ ಹರೀಶ್ ಗೌಡ ರವರ ನೇತೃತ್ವದಲ್ಲಿ, ಕೋಲಾರದ ಜನಪ್ರಿಯ ಸಂಸದರಾದ ಎಸ್.ಮುನಿಸ್ವಾಮಿ ರವರ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರು, ಸವಿತಾ ಸಮಾಜದವರು, ಹಾಗೂ ಆಟೋ ಚಾಲಕರಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ಆಹಾರ ಕಿಟ್ ವಿತರಣೆಯ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಕೋಲಾರದ ಸಂಸದ ಎಸ್.ಮುನಿಸ್ವಾಮಿ ರವರು “ಪ್ರಂಪಚ ಪೂರ್ತಿ ಆವರಿಸುವ ಮಹಾಮಾರಿ ಕೊರೋನಾ,ಎಲ್ಲಾರಿಗೂ ಸಹ ಸಮಸೈ ಉಂಟುಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಸದಾ ಕರೋನಾ ಸೈನಿಕರಾಗಿ ಸೇವೆ ಸಲ್ಲಿಸುತ್ತಿರುವ ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರಿಗೆ ಸಹಕಾರ ನೀಡುವುದು ನಮ್ಮ ಧರ್ಮ, ಆ ನಿಟ್ಟಿನಲ್ಲಿ ಇಂದು ಹರೀಶ್ ಗೌಡ ರವರು ಉತ್ತಮ ಸೇವೆ ಗೆ ಸಾಥ್ ನೀಡಿರುವುದು ಅಭಿನಂದನೀಯ” ಎಂದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರಾದ ವೇಣುಗೋಪಾಲ್ ರವರು ಮಾತನಾಡಿ “ಕರೋನಾ ಸಂಕಷ್ಟದ ಸಮಯದಲ್ಲಿ ಬಡವರಿಗೆ ನಿಮ್ಮಿಂದಾಗುವ ಸಹಾಯವನ್ನು ಮಾಡಿ, ಆ ಮೂಲಕ ಅವರ ಸೇವೆಗೆ ನಾವು ಅಭಿನಂದಿಸೋಣಾ” ಎಂದರು.
ಇದೇ ಸಂದರ್ಭದಲ್ಲಿ ಈ ಚಿಂತನೆ ಮಾಡಿ ಇಡೀ ಲಕ್ಕೂರು ಹೋಬಳಿ ಪೂರ್ತಿ ಸ್ಯಾನಿಟೈಸರ್ ಮಾಡುವ ಮೂಲಕ ಉತ್ತಮ ಸೇವೆ ಮಾಡಿದ ಸಮಾಜ ಸೇವಕ ಸಿ.ಜಿ.ಹರೀಶ್ಗೌಡ ಮಾತನಾಡಿ “ತಮ್ಮ ಕುಟುಂಬಗಳನ್ನು ಬಿಟ್ಟು ಇಂದು ಆಪತ್ತಿನಲ್ಲ್ಲಿ ಜೀವ ಕಳೆದುಕೊಳ್ಳುತ್ತಿರುವ ವ್ಯಕ್ತಿಗಳಿಗೆ ಸದಾ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೋಳ್ಳುತ್ತಿರುವ ಎಲ್ಲಾರಿಗೂ ಆಹಾರದ ಕಿಟ್ ನೀಡಿ ಸಣ್ಣ ಸಹಾಯ ನಮ್ಮಿಂದ ಅವರಿಗೆ ಸಲ್ಲಿಸಿ, ಅವರನ್ನು ಗೌರವಿಸುವ ಕೆಲಸ ನಮ್ಮಿಂದಾಗುವ ಮೂಲಕ ಇತರರಿಗೆ ಸ್ಪೂರ್ತಿ ಆಗಲಿ” ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಡಾ.ವೇಣು ಗೋಪಾಲ್, ಮಾಜಿ ಕೋಲಾರ ಜಿಲ್ಲಾಧ್ಯಕ್ಷರಾದ ಕೃಷ್ಣರೆಡ್ಡಿ, ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುನಾಥರೆಡ್ಡಿ, ಮಾಲೂರು ತಾಲ್ಲೂಕು ಮುಖಂಡರಾದ ಪ್ರೇಮ್, ಸಿದ್ದರೆಡ್ಡಿ, ಸತೀಶ್, ಸುರೇಶ್ ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.