(ವಿಶ್ವ ಕನ್ನಡಿಗ ನ್ಯೂಸ್) ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ನ ಹುಬ್ಬಳಿ-ಧಾರವಾಡ ಜಿಲ್ಲೆಗೆ ಜಿಲ್ಲಾ ಅಧ್ಯಕ್ಷರಾಗಿ ಮಂಜುನಾಥ್ ರಾಮ್ ಜಾಡಬಂದಿ ರವರನ್ನು ಆಯ್ಕೆ ಮಾಡಲಾಗಿದೆ.
ವಿಶ್ವಮಾನವ ಕುವೆಂಪು ಫೌಂಡೇಶನ್ ನ ರಾಜ್ಯ ಅಧ್ಯಕ್ಷರಾದ ಲಕ್ಕೂರು ಎಂ ನಾಗರಾಜ್ ಮಾತನಾಡಿ “ಯುವ ಉತ್ಸಾಹಿ,ಸಮಾಜದ ಬಗ್ಗೆ ಕಳಕಳಿ ಇರುವ ಮಂಜುನಾಥ್ ರವರನ್ನು ರಕ್ತದಾನ ನೇತ್ರದಾನ ಹಾಗೂ ಸಮಾಜ ಸೇವೆ ಎಂಬ ಮೂರು ಮಹಾಮಂತ್ರಗಳ ಹಾದಿಯಲ್ಲಿ ಆ ಭಾಗದ ಎಲ್ಲಾ ಜನರಿಗೆ ಸಹಾಯವಾಗಲಿ, ನಮ್ಮ ಫೌಂಡೇಶನ್ ನ ಗಟ್ಟಿಗೋಳಿಸಿ ಹೆಚ್ಚು ಸಮರ್ಥವಾಗಿ ಕೆಲಸ ಮಾಡಲಿ” ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಮಂಜುನಾಥ್ ರಾಮು ಜಡಾಬಂದಿ ರವರು “ವಿಶ್ವಮಾನವ ಕುವೆಂಪು ಫೌಂಡೇಶನ್ ನ ಸಂಪೂರ್ಣ ಸಂಘಟನಾತ್ಮಕವಾಗಿ ನಮ್ಮ ಭಾಗದಲ್ಲಿ ಬಲಪಡಿಸಿ, ಪ್ರಮಾಣಿಕ ಸೇವೆಯನ್ನು ಬಡಜನರಿಗೆ ತಲುಪಿಸುವ, ರಕ್ತದ ಅವಶ್ಯಕತೆ ಪೂರೈಸುವ ಕೆಲಸ ಮಾಡುತ್ತೇನೆ” ಎಂದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.