ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರ ಸಾಕಷ್ಟು ಕುಗ್ಗದೆ ಇದ್ದು ಇನ್ನೂ ಲಾಕ್ಡೌನ್ ಜಾರಿಯಲ್ಲಿರುವಾಗಲೇ, ರಾಜ್ಯ ಸರ್ಕಾರವು ವಿದ್ಯುತ್ ದರ ಏರಿಕೆ ಪ್ರಕಟಿಸಿರುವುದು ಬಹಳ ವಿಷಾದನೀಯ ವಿಚಾರವಾಗಿದೆಯೆಂದು, ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಇದರ ದ. ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷೆಯಾಗಿರುವ ಶ್ರೀಮತಿ ಮರ್ಯಂ ಶಹೀರರವರು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕೊರೋನ ಲಾಕ್ಡೌನ್ ನಿಂದಾಗಿ ಜನಗಳಿಗೆ ಕೆಲಸಗಳಿಲ್ಲದೆ, ವೇತನವಿಲ್ಲದೆ, ವ್ಯಾಪಾರಸ್ಥರಿಗೆ ಕೂಡಾ ತಮ್ಮ ವಹಿವಾಟುಗಳಿಲ್ಲದೆ ನಾಗರಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂಧರ್ಭದಲ್ಲಿ ಇದಾವುದರ ಪರಿವೆಯಿಲ್ಲದ ರಾಜ್ಯ ಸರಕಾರ, ಕರ್ನಾಟಕದ ಜನತೆಯ ಮೇಲೆ ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 30 ಪೈಸೆಯನ್ನು ಏಕಪಕ್ಷೀಯವಾಗಿ ಹೆಚ್ಚಿಸಿರುವುದು ಖಂಡನೀಯ. ಅದೂ ಅಲ್ಲದೆ, ಇದು ಕಳೆದ ಒಂದು ವರ್ಷದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮೂರನೇ ಬಾರಿಗೆ ವಿದ್ಯುತ್ ಶುಲ್ಕವನ್ನು ಏರಿಕೆ ಮಾಡುತ್ತಿದೆ. ಇದು ವಿದ್ಯುತ್ ಬಳಕೆದಾರರಿಗೆ ಸರಕಾರದ ಲಾಕ್ಡೌನ್ ಉಡುಗೊರೆಯೇ ಎಂದು ಪ್ರಶ್ನಿಸಿದ ಅವರು ಈಗಾಗಲೇ ಉಂಟಾದ ಆರ್ಥಿಕ ಸಂಕಷ್ಟತೆಗಳ ನಡುವೆ ಪೆಟ್ರೋಲ್ -ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದು ಸಹಿಸಲಸಾಧ್ಯವಾದ ಹೊರೆಯಾಗಿದ್ದು ಸರ್ಕಾರವು ತನ್ನ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂಬುವುದಾಗಿ ನಾವು ವೆಲ್ಪೇರ್ ಪಕ್ಷದ ದ.ಕ ಜಿಲ್ಲಾ ಸಮಿತಿಯ ವತಿಯಿಂದ ರಾಜ್ಯ ಸರಕಾರವನ್ನು ನಿವೇದಿಸಿಕೊಳ್ಳುವುದಾಗಿ ಅವರು ಇದೇ ಸಂಧರ್ಭದಲ್ಲಿ ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.