ತೀರ್ಥಹಳ್ಳಿ (ವಿಶ್ವ ಕನ್ನಡಿಗ ನ್ಯೂಸ್ ): ಉಡುಪಿಯಿಂದ ಕುಂದಾಪುರ/ಶಂಕರನಾರಯಾಣ ಮಾರ್ಗವಾಗಿ ಸಿದ್ದಾಪುರದಿಂದ ಶಿವಮೊಗ್ಗ ,ಸನಗರ ಗಳಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 52 ದುರಸ್ತಿ ಗೊಂಡು ಪುನರ್ ಸಂಚಾರಕ್ಕೆ ಹುಲಿಕಲ್ ಘಾಟಿ ರಸ್ತೆ ಉದ್ಘಾಟನೆ ಗೊಂಡಿತು .ತೀರ್ಥಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ,ಬಾಳೆಬರೆಯ ಚಂಡಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಉದ್ಘಾಟಿಸಿದರು .ತೀರಾ ನಾದುರಸ್ತಿಯಿಂದ ಕೂಡಿದ್ದ ರಸ್ತೆಯನ್ನು ಕಳೆದ ಒಂದೂವರೆ ತಿಂಗಳುಗಳಿಂದ ದುರಸ್ತಿ ಮಾಡಲಾಗಿತ್ತು. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ ರಸ್ತೆಯನ್ನು ಪೂರ್ಣ ಬಂದ್ ಮಾಡಲಾಗಿತ್ತು ಸುಮಾರು 4ಕೋಟಿ ರೂಪಾಯಿ ವೆಚ್ಚದಲ್ಲಿ 1.5ಕಿಮಿ ರಸ್ತೆನ್ನು ನಿರ್ಮಿಸಲಾಗಿದೆ .ಇನ್ನೂ ಬಾಕಿ ಉಳಿದಿರುವ ತಡೆಗೋಡೆ ಕಾರ್ಯ ಜಾರಿಯಲ್ಲಿದೆ ,ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.