ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) ವಿಶ್ವ ರಕ್ತದಾನಿಗಳ ದಿನಾಚರಣೆ – 2021 ಪ್ರಯುಕ್ತ ಕರ್ನಾಟಕ ರಾಜ್ಯ ಸರ್ಕಾರ ಯುವ ಜನ ಸಬಲೀಕರಣ ಕ್ರೀಡಾ ಇಲಾಖೆ, ರಾಜ್ಯ ಎನ್ಎಸ್ಎಸ್ ಮತ್ತು ಕರ್ನಾಟಕ ವಿದ್ಯಾರ್ಥಿ ಕೂಟ-ಕೆವಿಕೆ ಸಂಸ್ಥೆ ಜೊತೆಗೂಡಿ “ಕೊರೋನಾ ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನ ಕುರಿತು” ವೆಬಿನಾರ್ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಡಾ.ಶಾಲಿನಿ ರಜನೀಶ್ ಭಾ.ಆ.ಸೆ ಉದ್ಘಾಟಿಸಿ “ರಾಜ್ಯದ ರಕ್ತದಾನಿಗಳಿಗೆ ಶುಭ ಕೋರಿ ಯುವಕರು ಹೆಚ್ಚು ರಕ್ತದಾನ ಮಾಡವುಂತೆ ಪ್ರೇರೇಪಿಸಿದರು. ರಾಜ್ಯದ ಸಾರ್ವಜನಿಕರ ಆರೋಗ್ಯ ಕಾಪಡುವುದರಲ್ಲಿ ಬಹಳ ಮಹತ್ತ್ವದ ಸಾಮಾಜಿಕ ಕಾರ್ಯ ತಮ್ಮಿಂದಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆನ್ ಲೈನ್ ಮೂಲಕ ಮಾತನಾಡಿದರು.
ಎನ್ ಎಸ್ ಎಸ್ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳ ಬಗ್ಗೆ ಪ್ರತಾಪ್ ಲಿಂಗಯ್ಯ ಮಾಹಿತಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.
ಡಾ. ಸುರೇಶ್ ಅಂಗವಾಡಿ ಅಧ್ಯಕ್ಷರು ಹಿಮೊಫಿಲಿಯಾ ಸೊಸೈಟಿ ದಾವಣಗೆರೆ, ಪ್ರೊ ಪೆಥಾಲಜಿ ವಿಭಾಗ. ಜೆಜೆಎಂ ಮೆಡಿಕಲ್ ಕಾಲೇಜ್ ರವರು ಉಪನ್ಯಾಸ ಅತಿಥಿಯಾಗಿ “ಕೊರೋನ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನ” ಕುರಿತು ವಿಶೇಷ ಉಪನ್ಯಾಸ ನೀಡಿದರು, ರಕ್ತದಾನ ಬಗ್ಗೆ ಜಾಗೃತಿ ಮೂಡಿಸಿ ಅನೇಕರಲ್ಲಿ ಇದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿದರು. ಅಭಿನಂದನೆಗಳು ರಕ್ತದಾನಿಗಳ ಮಹತ್ತರ ಪಾತ್ರದ ಬಗ್ಗೆ ವಿದ್ಯಾರ್ಥಿ ಗಳಿಗೆ ಮತ್ತು ಎನ್ಎಸ್ ಎಸ್ ಅಧಿಕಾರಿಗಳ ಪಾತ್ರದ ಬಗ್ಗೆ ಬೆಳಕು ಚೆಲ್ಲಿದರು. ಪ್ರಶ್ನೆ ಕೆಳಿದವರಿಗೆಲ್ಲ ಉತ್ತರ ನೀಡಿದರು.
ಡಾ.ಸುನೀಲ್ ಚಿತ್ರಶೇಖರಯ್ಯ ಟೆಕ್ನಾಲಜೀಸ್ಟ್ ಯುಕೆ, ಕೆವಿಕೆ ಸಲಹೆಗಾರರು ಮಾತನಾಡಿ “ಸಮಾಜಮುಖಿ ಕಾರ್ಯಗಳನ್ನು ಸರ್ಕಾರ ಪ್ರೋತ್ಸಾಹ ನೀಡಬೇಕೆಂದರು. ಎಲ್ಲರು ಜೊತೆಗೂಡಿ ಕೆಲಸಮಾಡಿದರೆ ಬಹಳಷ್ಟು ಸಮಸ್ಯೆ ಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೂರಕ್ಕು ಹೆಚ್ವು ಬಾರಿ ರಕ್ತದಾನ ಮಾಡಿರುವ ಶ್ರೀ ವಿನೋದ್ ಕುಮಾರ್ ಬಿ ಕೆ , ಶ್ರೀಗಾಯಿತ್ರಿ ಸುತ ಮತ್ತು ಶ್ರೀ ಪ್ರಭು ಜಯಕುಮಾರ್ ಕೆಕ್ ಕಟ್ ಮಾಡುವ ಮೂಲಕ ಡಾ ಕಾರ್ಲ ಲ್ಯಾಂಡ್ ಸ್ಟೈನರ್ ಎ.ಬಿ.ಒ ಗುಂಪು ಸಂಶೋಧಕರ ಹುಟ್ಟು ಹಬ್ಬವನ್ನು ಆಚರಿಸಿ ರಾಜ್ಯದ, ದೇಶದ ಮತ್ತು ವಿಶ್ವದ ರಕ್ತದಾನಿಗಳಿಗೆ ಧನ್ಯವಾದ ಅರ್ಪಿಸಿ ಶುಭ ಕೋರಲಾಯಿತು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.