ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) ವಿದೇಶಿ ಜೈನ್ ಫ್ರೆಂಡ್ಸ್ ಗ್ರೂಪ್ ಮತ್ತು ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿದೇಶಿ ಜೈನ ಮಕ್ಕಳ ಆನ್ಲೈನ್ ಪಾಠ ಶಾಲೆ ದಿನಾಂಕ 16 – 06 – 2021 ರ ಬುಧವಾರ ಆನ್ಲೈನ್ ಮಾಧ್ಯಮದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀಮತಿ ಜಯಶ್ರೀ ಹೊರನಾಡು ಇವರ ನೇತೃತ್ವದಲ್ಲಿ ಶ್ರುತ ಪೂಜೆ ನಡೆಯಿತು. ಪರಮ ಪೂಜ್ಯ ಯುಗಲ ಮುನಿಗಳಾದ ಅಮರಕೀರ್ತಿ ಮುನಿಮಹಾರಾಜರು ಮತ್ತು ಅಮೋಘಕೀರ್ತಿ ಮುನಿಮಹಾರಾಜರು ಆಶೀರ್ವಚನಗೈದು ವಿದೇಶಕ್ಕೂ ಜೈನಾಗಮದ ವಿಚಾರ ಪಸರಿಸಿ ಅಹಿಂಸಾ ಧರ್ಮ ವಿಶ್ವವ್ಯಾಪಿಯಾಗಲಿ ಎಂದು ಶುಭಾಂಸನೆಗೈದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶೃದ್ಧಾ ಅಮಿತ್ ಜೈನ್ ಧರ್ಮಸ್ಥಳ ಅವರು ಜೈನ ಧರ್ಮದ ಭವ್ಯ ಪರಂಪರೆ ಅನವರತ ಬೆಳಗುತ್ತಿರಲಿ ಎಂದು ಶುಭ ಹಾರೈಸಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಾಡೋಜ ಹಂಪ ನಾಗರಾಜಯ್ಯನವರು ಮಾತನಾಡುತ್ತಾ ಶ್ರುತ ಪಂಚಮಿಯ ಹಿನ್ನಲೆ ಮುನ್ನಲೆಯನ್ನು ಪ್ರಸ್ತಾಪಿಸುತ್ತಾ ವಿಶ್ವದ ಮೊದಲ ಲಿಪಿಬದ್ಧ ಧರ್ಮಗ್ರಂಥವಾದ ಷಟ್ಖಂಡಾಗಮ ರೂಪುಗೊಂಡ ಬಗೆಯನ್ನು ಸವಿಸ್ತಾರವಾಗಿ ತಿಳಿಸಿದರು.
ಸುಹಾಸ್ತಿ ಯುವ ಜೈನ್ ಮಿಲನ್ ಅಧ್ಯಕ್ಷ ಪುಟ್ಟಸ್ವಾಮಿಯವರು ಮಾತನಾಡುತ್ತಾ ಮಕ್ಕಳ ಧಾರ್ಮಿಕ ಪಾಠ ಶಾಲೆಯನ್ನು ನಮ್ಮ ಸಂಘಟನೆಯಿಂದ ಹಮ್ಮಿಕೊಂಡಿರುವುದು ನಮ್ಮ ಸೌಭಾಗ್ಯವಾಗಿದೆ ಅಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರಿನ ಪ್ರಸನ್ನ ಕುಮಾರ್ ಅವರು ಮಾತನಾಡುತ್ತಾ ಧಾರ್ಮಿಕ ಪಾಠ ಶಾಲೆಯ ಉಪಯೋಗವನ್ನು ವಿಶ್ವದ ಇನ್ನಷ್ಟು ಹೆಚ್ಚು ಜೈನ ಮಕ್ಕಳು ಪಡೆಯಬೇಕೆಂದು ಕರೆ ನೀಡಿದರು.
ಖ್ಯಾತ ಲೇಖಕಿ , ಜಿನದರ್ಶನ ಕಾರ್ಯಕ್ರಮದ ಸಂಯೋಜಕಿ ಶ್ವೇತಾ ನಿಹಾಲ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ನಿರಂಜನ್ ಜೈನ್ ಕುದ್ಯಾಡಿ ಣಮೋಕಾರ ಮಂತ್ರ ಮತ್ತು ಚತ್ತಾರಿ ದಂಡಕ ಪಠಣಗೈದರು. ಸಂದೇಶ್ ಜೈನ್ ಮಾಡುಬಿದಿರೆ ಸ್ವಾಗತಿಸಿದರು. ಚಿತ್ತ ಜಿನೇಂದ್ರ ಪ್ರಸ್ತಾವನೆಗೈದರು. ಶ್ರೀಮತಿ ದೀಕ್ಷಾ ಜೈನ್ ಲಂಡನ್ ಪೂಜ್ಯ ಮುನಿಗಳನ್ನು ನಿವೇದನೆಗೈದರು. ವಜ್ರಕುಮಾರ್ ಜೈನ್ ಧನ್ಯವಾದಗೈದರು. ಮಹಾವೀರ್ ಪ್ರಸಾದ್ ಹೊರನಾಡು ಶಾಂತಿಮಂತ್ರ ಪಠಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.