ಶ್ರೀ ಪ್ರಸನ್ನನಾಥ ಸ್ವಾಮೀಜಿ ನೇತೃತ್ವದಲ್ಲಿ ಟಾರ್ಪಲ್ ವಿತರಣೆ.
(ವಿಶ್ವ ಕನ್ನಡಿಗ ನ್ಯೂಸ್)ಶಿವಮೊಗ್ಗ: ಮಹಾ ಮಾರಿ ಕೊರೊನಾ ದಳ್ಳುರಿಗೆ ರಾಜ್ಯ ತತ್ತರಿಸಿರುವಾಗ ಶ್ರೀ ಆದಿಚುಂಚನಗಿರಿ ಮಠ ಕಡು ಬಡವರು , ನಿರಾಶ್ರಿತರಿಗೆ ಹೊಟ್ಟೆ ತುಂಬಿಸುವ ಕಾಯಕವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ.
ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠ ಕಳೆದ ಮೇ 23ರಿಂದ ಇಂದಿನವರೆಗೆ ಅಲೆಮಾರಿಗಳಿಗೆ, ನಿರಾಶ್ರಿತರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳ ಪೋಷಕರು ಸೇರಿದಂತೆ ಪಡಿತರ ಚೀಟಿ ಇಲ್ಲದೆ ತುತ್ತಿಗಾಗಿ ಪರದಾಡುತ್ತಿರುವ ನೂರಾರು ಜನರಿಗೆ ಹಸಿವು ಇಂಗಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಶಾಖಾ ಮಠವು ದಾಸೋಹ ಹಾಗೂ ಕಿಟ್ ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಶಿವಮೊಗ್ಗದ ಶ್ರೀರಾಂಪುರದ ಹೊರವಲಯದಲ್ಲಿರುವ ಯಾವುದೇ ಹಕ್ಕು ಗಳಿಲ್ಲದೇ, ಪಡಿತರ ಚೀಟಿ ಇಲ್ಲದೆ, ಟೆಂಟ್ ಗಳಲ್ಲಿ ವಾಸ ಮಾಡುತ್ತಿರುವ ಸುಮಾರು 60 ನಿರ್ಗತಿಕರ ಕುಟುಂಬಗಳಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಶಿವಮೊಗ್ಗ ಶಾಖೆ ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಹಿರಿಯ ವಿದ್ಯಾರ್ಥಿಗಳು ಇವರ ಸಹಯೋಗದಲ್ಲಿ ನಿರಾಶ್ರಿತರಿಗೆ ಹಾಗೂ ಬಡ ಕಾರ್ಮಿಕರಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಗುಡುಸಲಿಗೆ ಹಾಕುವ ಟಾರ್ಪಲ್ ಹೊದಿಕೆಗಳನ್ನು ವಿತರಿಸಲಾಯಿತು.
ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ನಟರಾಜ ಭಾಗವತರಿಂದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಜೊತೆ ಸೇವಾ ಕೈಂಕರ್ಯ
ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ ನ ಹಿರಿಯ ವಿದ್ಯಾರ್ಥಿಗಳು ಶಿವಮೊಗ್ಗ ಮತ್ತು ಶ್ರೀಮಠದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಠದ ಜೊತೆ ಚುಂಚಾದ್ರಿ ಮಹಿಳಾ ಸೌಹಾರ್ದ ಸಹಕಾರಿ, ರಾಮಕೃಷ್ಣ ಚಾರಿಟಬಲ್ ಟ್ರಸ್ಟ್, ಒಕ್ಕಲಿಗರ ವೇದಿಕೆ, ಮಹಿಳಾ ಒಕ್ಕಲಿಗರ ವೇದಿಕೆ, ಹಾಪ್ ಕಾಮ್ಸ್, ಉಲ್ಲಾಸ್ ಐಸ್ ಕ್ರೀಮ್, ವಿಶಾಲ್ ಗ್ಲಾಸ್, ಶಿವಮೊಗ್ಗ ಡಯಾಗ್ನೋಸ್ಟಿಕ್ಸ್, ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಸೇರಿದಂತೆ ಹತ್ತು ಹಲವು ಸಂಘ-ಸಂಸ್ಥೆಗಳು ಸಮಾಜಮುಖಿ ಸೇವೆಗೆ ಕೈಜೋಡಿಸಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.