(www.vknews.com) ; ಮಂಗಳೂರು ಮೂಲದ ದುಬೈ ನ ಯಶಸ್ವಿ ಉದ್ಯಮಿ ಸಮಾಜ ಸೇವಕ ಹಿದಾಯತ್ ಅಡ್ಡೂರು ಅವರು ತಮ್ಮ ಹೊಸ ಯೋಜನೆ ದ ಪ್ರೆಶ್ ದುಬೈ, ಶಾರ್ಜಾ, ಅಬುಧಾಬಿಯಲ್ಲಿ ತಾಜಾ ಮೀನು ಚಿಕ್ಕ ನ್ ಹಾಗು ಮಟನ್ ಮಾಂಸ ವನ್ನು ಮನೆಯ ಬಳಿಗೆ ಪೂರೈಸುವ ಈ ಕಾಮರ್ಸ್ ಉದ್ಯಮವನ್ನು ಗಲ್ಪ್ ರಾಷ್ಟ್ರದ ಅನೇಕ ಉದ್ಯಮಿಗಳು ದುಬೈ ಯ ಭಾರತೀಯ ರಾಯಭಾರಿ ಕಛೇರಿಯ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರಾರಂಭಿಸಿದರು.
ಇದರ ಉದ್ಘಾಟನೆಯನ್ನು ದುಬೈ ನ ಉದ್ಯಮಿ ಹಾಗು ಹಿದಾಯತ್ ಅವರ ಸ್ನೇಹಿತ ರವೂಫ್ ಆಲಿ, executive director Arabia Holdings and Economic Holdings ಅವರು ನೆರವೇರಿಸಿದರು. ನೆರೆದ ಅತಿಥಿ ಗಳು ಹಿದಾಯತ್ ಅವರ ಸಮಾಜ ಸೇವೆ ಅವರು ಮಾಡಿದ ಸಹಾಯ ಹಾಗು ಹಿದಾಯತ್ ಅವರ ಸಾಧನೆ ಯ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದರು.
ಈ ಸಂದರ್ಭದಲ್ಲಿ ಹಿದಾಯತ್ ಅವರ ಮಿತ್ರರು ಉದ್ಯಮಿಗಳು ಆಗಿರುವ ಫಾರ್ಚೂನ್ ಗ್ರೂಪ್ ನ ಪ್ರವೀಣ್ ಶೆಟ್ಟಿ ವಕ್ವಾಡಿ ಉದ್ಯಮಿ ಹಾಗು ಕೊಡುಗೈ ದಾನಿ ರೊನಾಲ್ಡ್ ಕೊಲಾಸೋ, ಭಾರತೀಯ ರಾಯಭಾರಿ ಕಛೇರಿಯ ತಾಡು ಮಾಮು ರಶೀದ್ ಹಝಾರಿ, ಅನ್ವರ ನಹ, ರಾಜೇಶ್ ಸಿಕ್ವೇರಾ, ವಲೇರಿಯನ್ ಡಾಲ್ಮೀಡಿಯಾ, ಇಮ್ರಾನ್ ಸೇರಿದಂತೆ ಅನೇಕ ರು ಉಪಸ್ಥಿತರಿದ್ದರು, ಹಿದಾಯತ್ ಅವರಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದ ನಿರೂಪಣೆ ಯನ್ನು 92.7 ಬಿಗ್ ಎಫ್ ಎಮ್ ನ ಹೆಸರಾಂತ ರೇಡಿಯೋ ಜಾಕಿ ಎರಾಲ್ ಅವರು ನಡೆಸಿಕೊಟ್ಟರು. ಇಡೀ ಕಾರ್ಯಕ್ರಮ ಝೂಮ್ ಮೀಟಿಂಗ್ ನ ಮೂಲಕ ನಡೆಯಿತು ಬೇರೆ ಬೇರೆ ಸ್ಥಳದಿಂದ ಸುಮಾರು 60 ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.