ಮಂಗಳೂರು (www.vknews.com) : ದ.ಕ. ಜಿಲ್ಲೆ ಅತ್ಯುತ್ತಮ ವಿಧ್ಯಾಭ್ಯಾಸ ಕೇಂದ್ರವೆಂದು ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಹಲವು ದೇಶಗಳ ಹಾಗೂ ದೇಶದಾದ್ಯಂತದಿಂದ ಬಂದಿರುವ ವಿಧ್ಯಾರ್ಥಿಗಳು ಇಲ್ಲಿ ವಿಧ್ಯಾರ್ಜನೆಗೈಯ್ಯುತ್ತಿದ್ದಾರೆ.
ಆದರೆ, ಜಿಲ್ಲೆಯಲ್ಲಿರುವ ಖಾಸಗಿ ವೈದ್ಯಕೀಯ ಕಾಲೇಜುಗಳ ಮಾಫಿಯಾದಿಂದಾಗಿ, ಆ ಕಾಲೇಜುಗಳು ವಿಧಿಸುವ ದುಬಾರಿ ಶುಲ್ಕ ಮಾತ್ರ ಜಿಲ್ಲೆಯಲ್ಲಿರುವ ವಿಧ್ಯಾರ್ಥಿಗಳ ಪೋಷಕರಿಗೆ ಕೈಗೆಟುಕದಷ್ಟು ದುಬಾರಿಯಾಗಿಬಿಟ್ಟಿದೆ. ಖಾಸಗಿ ಆಸ್ಪತ್ರೆಗಳು ರೋಗಿಯ ಚಿಕಿತ್ಸೆಗಾಗಿ ವಿಧಿಸುವ ದುಬಾರಿ ಶುಲ್ಕ, ಅನಗತ್ಯ ಹಲವು ವಿಧದ ಪರೀಕ್ಷೆಗೆ ಒಳಪಡಿಸುವುದು-ಅಗ್ರಹಿಸುವುದು ಅದಕ್ಕಾಗಿ ವಿಧಿಸುವ ಶುಲ್ಕದಿಂದಾಗಿಯೂ ಹಲವು ಕುಟುಂಬಗಳು ತಮ್ಮ ಮನೆ-ಮಠಗಳನ್ನು ಮಾರಿ ಶುಲ್ಕ ಭರಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಆದ್ದರಿಂದ, ಜಿಲ್ಲಾ ಸರ್ಕಾರಿ ಆಸ್ಪತ್ರೆಯಾಗಿರುವ ವೆನ್ಲಾಕ್ ಅಸ್ಪತ್ರೆಯನ್ನು ಬೆಂಗಳೂರು ಹಾಗೂ ಹಾಸನದಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಂತೆ ಮೆಲ್ದರ್ಜೆಗೆರಿಸಿ, ಸುಸಜ್ಜಿತ ಆಸ್ಪತ್ರೆಯನ್ನಾಗಿಸಬೇಕು ಹಾಗೂ ಅಲ್ಲಿಯೇ ನೂತನ ಸರ್ಕಾರಿ ವೈಧ್ಯಕೀಯ ಆಸ್ಪತ್ರೆಯನ್ನು ರಚಿಸಲು ಮಂಜೂರಾತಿಯನ್ನು ಅತೀ ಶೀಘ್ರವೇ ನೀಡಬೇಕೆಂದು ಜೆಡಿಎಸ್ ರಾಜ್ಯ ಪ್ರ.ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮೂಲ್ಕಿ, ದ.ಕ.ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾದ ರಿಯಾಝ್ ಹೆಚ್. ಕಾರ್ನಾಡ್, ಹಾಗೂ ಜಿಲ್ಲಾ ಆ.ಸಂ. ಘಟಕದ ಉಪಾಧ್ಯಕ್ಷರಾದ ನಿಸಾರ್ ಅಹ್ಮದ್ ಮೂಲ್ಕಿಯವರು ರಾಜ್ಯದ ಮುಖ್ಯಮಂತ್ರಿ ಹಾಗೂ ಅರೋಗ್ಯ ಸಚಿವರನ್ನು ಒತ್ತಾಯಿಸಿದ್ದಾರೆ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.