ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ವಿಶ್ವಮಾನವ ಕುವೆಂಪು ಫೌಂಡೇಷನ್ (ರಿ.) VKF ವತಿಯಿಂದ ಇಂದು ಗುಡಿಸಲು ವಾಸಿಗಳಿಗೆ, ನಿರಾಶ್ರಿತರಿಗೆ, ರಸ್ತೆಹದಿಬದಿಯಲ್ಲಿರುವ ಜನರಿಗೆ ಊಟ, ನೀರು, ನೀಡುವ ಕಾರ್ಯವನ್ನು ಬಹಳ ಸುಸಜ್ಜಿತವಾಗಿ ಮಾಡಲಾಯಿತು.
ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ್ (ಬುಜ್ಜಿ) ರವರ ಹುಟ್ಟುಹಬ್ಬದ ಅಂಗವಾಗಿ ಇಂದು 200 ಜನರಿಗೆ ಊಟ ನೀಡಿ ಹಸಿವು ನಿಗಿಸುವ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ VKF ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ್ (ಬುಜ್ಜಿ) “ನಮ್ಮ ಫೌಂಡೇಶನ್ ವತಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ರಕ್ತದಾನ, ನೇತ್ರದಾನ ಹಾಗೂ ಸಮಾಜಸೇವೆ ಎಂಬುದನ್ನು ಮಾಡುತ್ತಿದ್ದು ಈ ಕರೋನಾ ಮಹಾಮಾರಿಯ ಸಂಕಷ್ಟದ ಪರಿಸ್ಥಿತಿಯಲ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಿಂದ ಆಚರಿಸದೇ ಸಮಾಜಕ್ಕೆ ಒಂದು ಉತ್ತಮ ಸಂದೇಶ ಹೋಗಲಿ ಎಂಬ ಆಶಯದಿಂದ ನಮ್ಮ ಅಧ್ಯಕ್ಷರ ಅಪ್ಪಣ್ಣೆ ಮೇರೆಗೆ ಇಂದು ಊಟ , ನೀರು ನೀಡಿ ಹಸಿವು ನಿಗಿಸುವ ಸಣ್ಣ ಕಾರ್ಯಮಾಡುತ್ತಿರುವುದು ನನಗೆ ಬಹಳ ಸಂತಸ, ಈ ಕಾರ್ಯಕ್ಕೆ ಪ್ರತಿಯೋಬ್ಬರು ಸ್ಪಂದಿಸಿ, ಕೈ ಜೋಡಿಸಿ” ಎಂದರು.
ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ರಾಜ್ಯ ಅಧ್ಯಕ್ಷರಾದ ಲಕ್ಕೂರು ಎಂ ನಾಗರಾಜ್ ಮಾತನಾಡಿ “ವಿಶ್ವವನ್ನೇ ತಲ್ಲಣಗೋಳಿಸಿರುವ ಕರೋನಾ ಸಂದರ್ಭದಲ್ಲಿ ನಮ್ಮ ತಂಡದ ಪದಾಧಿಕಾರಿ ಹಾಗೂ ವಿದ್ಯಾರ್ಥಿ ಮಿತ್ರ ಶ್ರೀಕಾಂತ್ ಹುಟ್ಟುಹಬ್ಬಕ್ಕೆ ನಾವು ಊಟ, ನೀರು ನೀಡುವ ಮೂಲಕ ಸಮಾಜಮುಖಿ ಸೇವೆ ಮಾಡುವ ಮೂಲಕ ಬಡವರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಆಶಯದಿಂದ ಇಂದು ಈ ಕಾರ್ಯ ಮಾಡುತ್ತಿದ್ದೀವಿ. ಯಾರಿಗೆ ಯಾವುದೇ ಸಂದರ್ಭದಲ್ಲಿ ಊಟದ ಅವಶ್ಯಕತೆ ಇದ್ರೆ ಖಂಡಿತ ಅವರಿಗೆ ಊಟ ನೀರು ನೀಡಿ ನಮ್ಮಿಂದಾಗುವ ಸಹಾಯವನ್ನು ನಮ್ಮ ಫೌಂಡೇಶನ್ ಸದಾ ಮಾಡುತ್ತದೆ ಆ ನಿಟ್ಟಿನಲ್ಲಿ ತಾವು ನಮ್ಮೊಂದಿಗೆ ಕೈ ಜೋಡಿಸಿ” ಎಂದರು.
ಸೇವಾ ಕಾರ್ಯಕ್ರಮದಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ಪದಾಧಿಕಾರಿ ಮಂಜುನಾಥ್ ರವರು ಮಾತನಾಡಿ “ನಮ್ಮ ಫೌಂಡೇಶನ್ ಸರಿಸುಮಾರು ಮೂರು ವರ್ಷದಿಂದ ಎಲ್ಲಾ ರೀತಿಯಲ್ಲೂ ಸೇವೆಗಳನ್ನು ಮಾಡುತ್ತಾ ಬಂದಿದೆ. ದನಿ ಇಲ್ಲದ ಜನರ ಪಾಲಿಗೆ ಧ್ವನಿಯಾಗುವ ಹಾಗೂ ಕಷ್ಟದಲ್ಲಿರುವವರ ಕುಟುಂಬಗಳಿಗೆ ಸ್ಪಂದಿಸುವ ಕಾರ್ಯ ನಿರಂತರವಾಗಿ ಮಾಡುತ್ತದೆ, ಎಲ್ಲಾ ಯುವಕರು ನಮ್ಮ ಫೌಂಡೇಶನ್ ಗೆ ಕೈ ಜೋಡಿಸಿ” ಎಂದರು.
ಈ ಸಂದರ್ಭದಲ್ಲಿ ವಿಶ್ವಮಾನವ ಕುವೆಂಪು ಫೌಂಡೇಶನ್ (ರಿ.) VKF ನ ರಾಜ್ಯ ಅಧ್ಯಕ್ಷ ಲಕ್ಕೂರು ಎಂ ನಾಗರಾಜ್, ಸುನೀಲ್ ಕುಮಾರ್, ಶ್ರೀಕಾಂತ್, ಮಂಜುನಾಥ್ ಹಾಗೂ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.