ಜೋಕಟ್ಟೆ (www.vknews.com): ಕೋವಿಡ್ನ ಈ ಮಹಾ ಮಾರಿಯ ಸಂದರ್ಭದಲ್ಲಿ ಜನರು ಆರೋಗ್ಯ, ಲಸಿಕೆ ಆಹಾರ ಕಿಟ್ ಹಾಗು ವೈಧ್ಯಕೀಯ ಪರಿಕರಣಗಳಿಗೆ ಪರದಾಡುವ ಈ ಸಂದರ್ಭದಲ್ಲೂ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿಲ್ಲ, ಬಿಜೆಪಿ ಸರಕಾರ ತೊಲಗದೇ ಈ ದೇಶ ಉದ್ದಾರವಾಗದು.
ಬೆಲೆ ಏರಿಕೆಯನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರವು ಇಂದು ಜನ ಪರವಾಗಿ ಯಾವುದೇ ಕಾಳಜಿಯಿಲ್ಲದೇ ನಿರಂತರವಾಗಿ ತೈಲಬೆಲೆ ಏರಿಕೆ ಮಾಡುತ್ತಲೇ ಇದೆ. ಕೇಂದ್ರ ಸರಕಾರದ ಈ ಜನ ವಿರೋದಿ ನೀತಿಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತಿದೆ ಎಂದು ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಹೇಳಿದರು .
ಇವರು ಇತ್ತೀಚಿಗೆ ಜೋಕಟ್ಟೆ ಎಸ್ ಡಿ ಪಿ ಐ ಗ್ರಾಮ ಸಮಿತಿ ವತಿಯಿಂದ ಕೆ.ಬಿ.ಎಸ್ ಪೆಟ್ರೋಲ್ ಬಂಕ್ ಬಳಿ ನಡೆದ ಪ್ರತಿಭಟನೆಯನ್ನುದ್ದೆಶಿಸಿ ಮಾತನಾಡಿದರು. ಬೈಕ್ನ್ನು ಚಟ್ಟಕ್ಕೆ ಕಟ್ಟಿ ಹೊತ್ತುಕೊಂಡು ಹೋಗುವ ರೀತಿ, ಸರಕು ಸಾಗಟ ವಾಹನವನ್ನು ಎಳೆಯುವ ಮೂಲಕ ವಿಬಿನ್ನ ರೀತಿಯಲ್ಲಿ ಪ್ರತಿಭಟಿಸಲಾಯಿತು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಆಶ್ರಫ್ ಸಲ್ವಾ, ಇಮ್ತಿಯಾಝ್, ಮುಶೀರ್, ಇಸ್ಮಾಯಿಲ್ ಕೆ.ಎಮ್, ಶಾಹಿಲ್ ಹಾಗು ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಝ್ ಅಲಿ, ಶಿಹಾಬ್ ಮುತಾಂದವರು ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.