(ವಿಶ್ವ ಕನ್ನಡಿಗ ನ್ಯೂಸ್): ಕವಿತೆ : ಧ್ವನಿ ನಾನು ಊರು ಬಿಡುವ ಹೊತ್ತಿನಲ್ಲಿ ಟವರ್ ಗಳ ಅಬ್ಬರ ಹಕ್ಕಿಗಳ ಕಲರವವನ್ನು ಕಂಗೆಡಿಸುತ್ತಿದ್ದವು. ವಿದ್ಯುತ್ ತಂತಿಗಳ ಹೊಸ ಸರಣಿಗೆ ಹೆದರಿ ಗರ್ಭಗುಡಿಯ ಮೂಲೆಯಲ್ಲಿ ಹುದುಗಿಕೊಂಡಿದ್ದವು
ನಾನು ಊರುಬಿಡುವ ಹೊತ್ತಿನಲ್ಲಿ ನಮ್ಮೂರಿನ ಕೆರೆಕಟ್ಟೆಗಳು ಗುನುಗಲಾರೆದೆ ಬಿಮ್ಮಗೆ ಬಿಗಿದುಕೊಂಡಿದ್ದವು.
ನನಗೆ ಈಗಲೂ ನೆನಪಿದೆ ಹಳೆಯ ಮನೆಯಲ್ಲಿ ಹೊಸ ಮಡಿಕೆ ಅದರದ್ದೇ ಆದ ಧ್ವನಿಯಲ್ಲಿ ಶುಭಕೋರುತ್ತಿತ್ತು! ಭವ್ಯ ನಗರಗಳ ಭವ್ಯ ಭವಿಷ್ಯವನ್ನು ಬರೆಯಲು ಹೊರಟಿರುವ ಹಳೆಯ ಕೈಗಳೇ ಹೊಸ ಸ್ಪರ್ಶಕ್ಕೆ ಹೆದರದಿರಿ ಅನ್ನುವಂತಿದ್ದವು!!
ಕಿಟಕಿಯ ಹಿಂದೆ ನನ್ನ ದೃಷ್ಟಿ ಹೊರಗಿರುವ ವಿಸ್ತಾರ ಬೆಳಕಿಗೆ ಮುಚ್ಚಿಕೊಂಡಿತು ವೇಗದುಸಿರಿನಲ್ಲಿ ಸರಿದ ಚಿತ್ರಗಳಲ್ಲಿ ಯಾರೆಲ್ಲ ಇದ್ದರು? ಕೈಬೀಸಿದ ಪುಟ್ಟ ಕೈಗಳು ಯಾಕೆ ಮುಖ ಮುಚ್ಚಿ ಅತ್ತವು?
…….. ಈಗ ಎಲ್ಲಾ ಕಡೆ ಮುಸುಕು ಮುಸುಕು ದಶಕಗಳ ನಂತರ ಹಳೆಯ ಹಾಡಿಗೆ ಮತ್ತೆ ಧ್ವನಿ ತೆಗೆಯಬೇಕಾಗಿದೆ; ಹೊಸದೊಂದು ರಾಗವ ಹಾಡಬೇಕಿದೆ.
*ಡಾ.ನಾ.ಮುನಿರಾಜು*
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.