ಶ್ರೀನಿವಾಸಪುರ( ವಿಶ್ವ ಕನ್ನಡಿಗ ನ್ಯೂಸ್ ):– ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಆರ್ಯ ವೈಶ್ಯ ಸಮಾಜದ ೨ ನೇ ಪೀಠಾಧಿಪತಿಯಾಗಿ ಸಚ್ಚಿದಾನಂದ ಸ್ವಾಮೀಜಿ ಪೀಠಾರೋಹಣದ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು ದೇವಾಲಯದ ಸಭಾಂಗಣದಲ್ಲಿ ಗೋಪೂಜೆ ಮಾಡಲಾಯಿತು. ದೇವಿ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರ ಮಾಡಲಾಯಿತು . ಸಮಾಜದ ಮಹಿಳಾ ಘಟಕದ ಸದಸ್ಯರು ಭಕ್ತಿ ಗೀತೆಗಳನ್ನು ಹಾಡಿದರು .
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಚಲಿಗಾನಹಳ್ಳಿ ಗ್ರಾಮದ ಸಮೀಪ ಸ್ಥಾಪಿಸಲಾಗಿರುವ ಕೋವಿಡ್ ಆಸ್ಪತ್ರೆಯ ಒಳ ರೋಗಿಗಳಿಗೆ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತಯ ಡಾ// ಶ್ರೀನಿವಾಸ್, ಸ್ತ್ರೀರೋಗತಜ್ಞ ಡಾ //ಗೌಸಿಯಾ ಬಾನು, ಮುಖಂಡರಾದ ವೈ.ಆರ್.ಶಿವಪ್ರಕಾಶ್ , ಕೆ.ವಿ.ಸೂರ್ಯನಾರಾಯಣಶೆಟ್ಟಿ , ವೈ.ಆರ್.ನಾಗೇಂದ್ರ ಬಾಬು , ಎಸ್.ಸಿ.ಅಮರನಾಥ್ , ಕೇದಾರನಾಥ್ , ವಾಯ್ಸ್ ಆಫ್ ಶ್ರೀನಿವಾಸಪುರ ಕನ್ನಡ ವಾರಪತ್ರಿಕೆಯ ಸಂಪಾದಕರು ಎಸ್ ಲಕ್ಷ್ಮಣ್ ಬಾಬು , ಎಸ್.ಎನ್.ಬಾಬು , ಸತ್ಯನಾರಾಯಣಶೆಟ್ಟಿ , ಪಾಂಡು , ಸುಬ್ರಮಣಿ , ಕಿಶೋರ್ ಇದ್ದರು . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.