ಮುಂದಿನ ಪೀಳಿಗೆಗೆ ವಿಲ್ ಬರೆಯುವುದು ಹೇಗೆ ವಿಚಾರ ಸಂಕೀರ್ಣದಲ್ಲಿ ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಸಂಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್
(ವಿಶ್ವ ಕನ್ನಡಿಗ ನ್ಯೂಸ್) ಮುಂಬೈ :ಜಗತ್ತು ಇಂದು ಗೊಂದಲದಿಂದ ಕೂಡಿದ್ದು ನಾಳೆ ಏನಾಗಬಹುದು ಎಂಬ ಕಲ್ಪನೆಯ ಭೀತಿಯಲ್ಲಿ ವಿಲ್ ಬರೆಸುವವರು ಅನಾದಿ ಕಾಲದಿಂದಲೂ ಇದ್ದರು, ಇದಕ್ಕೆ ಸಾಕಾರ ನೀಡುವಂತೆ ಮುಂಬಯಿಯಲ್ಲಿರುವ ಆಂಜನಾ ಲಾ ಅಸೋಸಿಯೇಟ್ಸ್ ನವರು “ವಿಲ್ ಬರೆಸುವುದು ಹೇಗೆ ” ಕುರಿತು ಅಂರ್ಜಾಲ ವಿಚಾರ ಸಂಕೀರ್ಣವನ್ನು ಇತ್ತೀಚಿಗೆ ನಡೆಸಿದರು.
ಸುಮಾರು ನೂರಕ್ಕೂ ಮೀರಿದ ನೆಟ್ಟಿಗರು ಭಾಗವಹಿಸಿದ್ದ ಈ ವೆಬಿನಾರ್ ನಲ್ಲಿ ಅಡ್ವೋಕೇಟ್ ಆಂಜನಾ ಶರ್ಮಾ ಅವರು ಸಮಗ್ರ ಮಾಹಿತಿಯನ್ನು ಸವಿವರವಾಗಿ ವಿವರಿಸಿ ಭಾಗವಹಿಸಿದ ಪ್ರೇಕ್ಷಕರ ಸಂದೇಹಗಳಿಗೆ ಸಮರ್ಪಕ ಸಲಹೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಅಡ್ವೋಕೇಟ್ ಆಂಜನಾ ಶರ್ಮ ಅವರು ಶಿವಮೊಗ್ಗದ ಕೊಡಕ್ಕಲ್ ಶಿವಪ್ರಸಾದ್ ಅಂಗವಿಕಲರ ಸೇವೆಯನ್ನು ನಡೆಸುತ್ತಿರುವ ಪರಿಯನ್ನು ಬನ್ನಿಸಿದ್ದರಲ್ಲದೆ ಕೊಡಕ್ಕಲ್ ಅವರ ಅದ್ಯಕ್ಷತೆಯಲ್ಲಿ ನಡೆಯುತ್ತಿರುವ ಭಾರತೀಯ ಅಂಗವಿಕಲರ ಸಬಲೀಕಾರಣ ಸಂಸ್ಥೆಗೆ ತಮ್ಮ ನೇತ್ರಿತ್ವದ ಆಂಜನಾ ಲಾ ಅಸೋಸಿಯೇಟ್ಸ್ ಸಂಪೂರ್ಣ ಬೆಂಬಲ ನೀಡುವುದಲ್ಲದೆ ಅವರ ಸಂಸ್ಥೆಯ ಕಾನೂನು ಸಲಹೆಗಾರರಾಗಿರುವದನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಕಾನೂನು ಪ್ರಿಯರು ಭಾಗವಹಿಸಿ ಚಂದಗಾಣಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.