ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಖಿದ್ಮಾ ಫೌಂಡೇಶನ್ ಕರ್ನಾಟಕ ದಿವಂಗತ ದಲಿತ ಕವಿ ನಾಡೋಜ ಡಾ: ಸಿದ್ಧಲಿಂಗಯ್ಯ ಅವರ ಸ್ಮರಣಾರ್ಥ ಅಯೋಜಿಸಲಾಗಿದ್ದ ಅಂತರ್ಜಾಲ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಲೇಖಕಿ, ಪ್ರಾಧ್ಯಾಪಕಿ, ಕೇಂದ್ರ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಪದ್ಮಿನಿ ನಾಗರಾಜು ದಿವಂಗತ ಸಿದ್ಧಲಿಂಗಯ್ಯ ಅವರ ಸಾಹಿತ್ಯ, ಹೋರಾಟ ಎಲ್ಲವು ಆಧುನಿಕ ಜಗತ್ತಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕವಿಗಳು ನಾಟಕಕಾರರೂ ಆದ ಡಾ. ಬೇಲೂರು ರಘುನಂದನ್ ಬೆಂಗಳೂರು ಹಾಗೂ ಸಮಾಜ ಸೇವಕ ಡಾ. ನಂದಿ ಭಾಷ ಶುಭನುಡಿಗಳನ್ನಾಡಿದರು. ಮಂಗಳೂರಿನ ಹಿರಿಯ ಸಾಹಿತಿಗಳಾದ ಡಾ. ಸುರೇಶ ನೆಗಳಗುಳಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದರು. ಕವಿಗೋಷ್ಠಿಗೆ ಸುಮಾರು 80 ಕ್ಕೂ ಮಿಕ್ಕ ಕವಿಗಳು ಹೆಸರು ನೋದಾಂಯಿಸಿದ್ದು, ಕವನ ವಾಚನ ಮಾಡಿ ಸುಮಾರು ನೂರಕ್ಕೂ ಹೆಚ್ಚು ಭಾಗವಹಿಸಿದ್ದರು.
ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಾಶಿಂ ಬನ್ನೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಮವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಸ್ಟಾಗತಿಸಿ, ಕುಮಾರಿ ರಮ್ಯ ಬೆಂಗಳೂರು ವಂದಿಸಿದರು ಎಂದು ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.