(www.vknews.com) : ಎಸ್ಸೆಸ್ಸೆಫ್ ಇನೋಳಿ ಶಾಖೆಯ ವತಿಯಿಂದ ‘ಮುತಅಲ್ಲಿಮರಿಗೊಂದು ಸೆಲ್ಯೂಟ್’ ಕಾರ್ಯಕ್ರಮ ಆದಿತ್ಯವಾರ ಸಂಜೆ ಎಸ್ಸೆಸ್ಸೆಫ್ ಶಾಖಾ ಕಚೇರಿಯಲ್ಲಿ ನಡೆಯಿತು. ಶಾಖಾಧ್ಯಕ್ಷ ಅಲ್ತಾಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬೂ ಹಫ್ಸ್ ಅಹ್ಸನಿ ಹಾಗೂ ಕೆ.ಸಿ.ಎಫ್ ಶಾರ್ಜಾ ಝೋನ್ ಅಧ್ಯಕ್ಷ ಅಬೂಸ್ವಾಲಿಹ್ ಸಖಾಫಿ ತರಬೇತಿ ನೀಡಿದರು.
ಎಸ್ವೈಎಸ್ ಹರೇಕಳ ಸೆಂಟರ್ ಅಧ್ಯಕ್ಷ ಹೈದರ್ ಅಲೀ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಕೋಶಾಧಿಕಾರಿ ಅಲ್ತಾಫ್ ಫಾಳಿಲಿ, ಎಸ್ವೈಎಸ್ ಇನೋಳಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಮದ್, ಎಸ್ಸೆಸ್ಸೆಫ್ ಇನೋಳಿ ಶಾಖೆಯ ಮಾಜಿ ಕಾರ್ಯದರ್ಶಿ ಯಾಕೂಬ್,ಇಖ್ಬಾಲ್ ಕಕ್ಕೆಬೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್ವೈಎಸ್ ಇನೋಳಿ ಬ್ರಾಂಚ್ ಅಧ್ಯಕ್ಷ ನಾಸೀರ್, ಇಸ್ಮಾಯಿಲ್ ಕಿಲ್ಲೂರ್, ಕೆಸಿಎಫ್ ಪ್ರತಿನಿಧಿ ಫಾರೂಖ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಶಾಖಾ ಜೊತೆ ಕಾರ್ಯದರ್ಶಿ ಝೈನುದ್ದೀನ್ ಸ್ವಾಗತಿಸಿ. ಶಾಖಾ ಪ್ರಧಾನ ಕಾರ್ಯದರ್ಶಿ ಉನೈಸ್ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.