(www.vknews.com) : ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರಕಾರವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸುವ ಜನಸಾಮಾನ್ಯರ ದನಿಯಾಗಿ ಜನಾಗ್ರಹ ಆಂದೋಲನ ರೂಪತಳೆದಿದೆ. ರಾಜ್ಯದ ನೂರಾರು ಗಣ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ಮುಖ್ಯಮಂತ್ರಿಗೆ ಮೂರು ಬಾರಿ ಪತ್ರ ಬರೆದಿದ್ದಾರೆ ಮತ್ತು ಎರಡು ಸುತ್ತಿನ ರಾಜ್ಯವ್ಯಾಪಿ ಪ್ರತಿಭಟನೆಗಳೂ ನಡೆದಿವೆ. ಜನಾಗ್ರಹ, ಜನಪರ ಸಂಘಟನೆಗಳು ಹಾಗೂ ಮಾಧ್ಯಮUಳ ಒತ್ತಡಗಳಿಂದಾಗಿ ಎರಡು ಪ್ಯಾಕೇಜುಗಳನ್ನು ಸರ್ಕಾರ ಘೋಷಿಸಿದೆ ಹಾಗೂ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇವು ಏನಕ್ಕೂ ಸಾಲದ ಅರೆಮನಸ್ಸಿನ ಅರೆಬರೆ ಕ್ರಮಗಳಾಗಿವೆ.
ಕುಟುಂಬಗಳು ಕುಸಿದು ಕೂತಿವೆ. ಬಂಧುಗಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿ ಮುಳುಗಿವೆ. ಆರ್ಥಿಕತೆ ನೆಲಕಚ್ಚಿದೆ. ಅನೇಕ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಯುತ್ತಿದೆ. ದುಡಿಮೆಗಳು ಪ್ರಾರಂಭವಾಗುವ, ಪರಿಸ್ಥಿತಿ ಸುಧಾರಿಸುವ ಮಾತು ದೂರವಿದೆ. ಅಲ್ಲದೆ ಮೂರನೇ ಅಲೆಯ ಕತ್ತಿ ನೆತ್ತಿಯ ಮೇಲೆ ತೂಗುತ್ತಿದೆ. ಇದೊಂದು ಅಸಾಮಾನ್ಯ ಪರಿಸ್ಥಿತಿ. ಇದು ಅಸಾಮಾನ್ಯ ಕ್ರಮಗಳನ್ನು ಕೇಳುತ್ತಿದೆ. ಆದರೆ ಸರ್ಕಾರ ಇದನ್ನು ದಿಟ್ಟವಾಗಿ ಎದುರಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿಲ್ಲ.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.